Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ಆಂಧ್ರ ಪ್ರದೇಶ ಮತ್ತು ಶ್ರೀಶೈಲ ದರ್ಶನ -5 ದಿನಗಳ ಪ್ರವಾಸ

ಸಂದರ್ಶಿಸುವ ಸ್ಥಳಗಳು: 

ಶ್ರೀಶೈಲ ಜ್ಯೋತಿರ್ಲಿಂಗ, ಮಂತ್ರಾಲಯ, ಮಹಾನಂದಿ, ಪಾತಾಳ ಗಂಗೆ, ಹೇಮರೆಡ್ಡಿ ಮಲ್ಲಮ್ಮ ದೇವಾಲಯ, ರಾಮೋಜಿ ಫಿಲಂ ಸಿಟಿ, ಹೈದ್ರಾಬಾದ್

  • ಆಸಕ್ತರು ರೂ, 5,000/- ಅಡ್ವಾನ್ಸ್ ಹಣ ಸಲ್ಲಿಸಿ ತಮ್ಮ ಸೀಟು ಕಾದಿರಿಸಿಕೊಂಡು ಬಾಕಿ ಹಣ 15 ದಿನಗಳ ಮುಂಚೆ ಪೂರ್ತಿ ಹಣ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು. ಯಾತ್ರಿಕರು ಎಲೆಕ್ಷನ್ ಐ ಡಿ/ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರತಕ್ಕದ್ದು.
  • ನೈಸರ್ಗಿಕ ಕಾರಣಗಳಿಂದ ಪ್ರಯಾಣ ವಿಳಂಬವಾದಲ್ಲಿ ಅಥವಾ ಸಂದರ್ಶನ ಸಮಯದಲ್ಲಿ ಯಾತ್ರಿಕರಿಂದ ವಿಳಂಬವಾಗಿ ಈ ಕಾರಣದಿಂದ ಯಾವುದಾದರೂ ಸಂದರ್ಶನ ಲಭ್ಯವಾಗದಿದ್ದಲ್ಲಿ ವ್ಯವಸ್ಥಾಪಕರು ಜವಾಬ್ದಾರರಲ್ಲ ಇದರ ಬಗ್ಗೆ ಯಾವುದೇ ದೂರು ಸಲ್ಲದು. ಪ್ರಯಾಣ ಸಮಯದಲ್ಲಿ ಇಚ್ಚಿಸಿದ ಸೀಟುಗಳಿಗೆ ಅವಕಾಶವಿರುವುದಿಲ್ಲ. ಬಸ್ಸಿನಲ್ಲಿ ಪ್ರತಿನಿತ್ಯ ಸೀಟುಗಳನ್ನು ಬದಲಾಗಿಸಲಾಗುವುದು.  ರೈಲಿನಲ್ಲಿ ಮಾತ್ರ ಕಂಪ್ಯೂಟರ್ ಮುಖಾಂತರ ಲಭ್ಯವಿರುವ ಸೀಟುಗಳನ್ನು ಕಡ್ಡಾಯವಾಗಿ ಪಡೆಯಬೇಕು.
  • ಯಾವುದೇ ಕಾರಣದಿಂದ ತಮ್ಮ ಸೀಟುಗಳನ್ನು ರದ್ದುಪಡಿಸಿದಲ್ಲಿ ಯಾವುದೇ ರಿಫಂಡ್ ಇರುವುದಿಲ್ಲ.
  • ಮೇಲ್ಕಂಡ ವಿಶೇಷ ಯಾತ್ರೆಯು ಲಾಭ-ನಷ್ಟ ರಹಿತವಾದ ಸಮಾಜಿಕ ಸ್ವಯಂ ಸೇವಾ ಕಾರ್ಯಕ್ರಮವಾಗಿದ್ದು ಯಾತ್ರಿಕರು ಹೆಚ್ಚಿನ ಸೌಲಭ್ಯ ನಿರೀಕ್ಷಿಸದೇ ಆಯೋಜಕರಿಗೆ ಸಹಕರಿಸಬೇಕಾಗಿ ವಿನಂತಿ.

Included/Excluded

  • ಬೆಳಿಗ್ಗೆ ಕಾಫಿ / ಟೀ ಬೆಳಗಿನ ಉಪಹಾರ, ಎರಡು ಊಟ ಮತ್ತು ರಾತ್ರಿ ತಂಗಲು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು.
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು

Tour Plan

1ನೇ ದಿನ

ಶಿವಮೊಗ್ಗದಿಂದ ಸಂಜೆ 6.00 ಗಂಟೆಗೆ ಮಂತ್ರಾಲಯಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡುವುದು.

2ನೇ ದಿನ

ಬೆಳಿಗ್ಗೆ 5.00 ಗಂಟೆಗೆ ಮಂತ್ರಾಲಯ ತಲುಪಿ, ತುಂಗಭದ್ರ ನದಿ ದಡದಲ್ಲಿ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಮಾಡಿದ ನಂತರ ಮಹಾನಂದಿಗೆ ತೆರಳುವುದು. ಮಹಾನಂದಿಯ ಮಹಾನಂದೇಶ್ವರ ಕೊಳದಲ್ಲಿ ಪುಣ್ಯಸ್ನಾನ ಮಾಡಿ ಶ್ರೀಶೈಲಂನಲ್ಲಿ ತಂಗುವುದು.

3ನೇ ದಿನ

ಬೆಳಿಗ್ಗೆ ಜ್ಯೋತಿರ್ಲಿಂಗÀಗಳಲ್ಲಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ, ಭ್ರಮರಾಂಭ ದರ್ಶನ ಮಾಡಿ ನಂತರ ಜಗದ್ಗುರುಗಳು ಇದ್ದರೆ ಅವರ ದರ್ಶನ ಆಶೀರ್ವಾದ ಪಡೆದು ನಂತರ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲಂ ಪೀಠದ ದರ್ಶನ ಮಾಡಿ, ರೋಪ್ ವೇ ಮುಖಾಂತರ ಪಾತಾಳಗಂಗೆ ವೀಕ್ಷಿಸುವುದು. ಅಲ್ಲಿಂದ ಹಲವಾರು ಸ್ಥಳಗಳನ್ನು ನೋಡಿ ಮಧ್ಯಾಹ್ನ ಊಟದ ನಂತರ ಹೈದ್ರಾಬಾದ್ ಕಡೆಗೆ ಪ್ರಯಾಣಿಸಿ ಹೈದ್ರಾಬಾದ್‌ನಲ್ಲಿ ತಂಗುವುದು.

4ನೇ ದಿನ

ಬೆಳಿಗ್ಗೆ 7.00 ಗಂಟೆಗೆ ಹೊರಟು ಪೂರ್ಣದಿನ ರಾಮೋಜಿ ಫಿಲಂಸಿಟಿ ವೀಕ್ಷಣೆ ಮಾಡಿ ರಾತ್ರಿ  ಹೈದ್ರಾಬಾದ್‌ನಲ್ಲಿ ತಂಗುವುದು.

5ನೇ ದಿನ

ಬೆಳಿಗ್ಗೆ ತಿಂಡಿಯ ನಂತರ ಚಾರ್‌ಮಿನಾರ್ ವೀಕ್ಷಣೆ ಬಿರ್ಲಾ ಮಂದಿರ, ರಾಮಾನುಜಾಚಾರ್ಯರ ಪ್ರತಿಮೆ ವೀಕ್ಷಣೆ ಇನ್ನೂ ಮುಂತಾದ ಸ್ಥಳಗಳ ವೀಕ್ಷಣೆ ಮಾಡಿ ಶಾಪಿಂಗ್ ಮಾಡುವವರು ಶಾಪಿಂಗ್ ಮಾಡುವುದು ವಿಶ್ರಾಂತಿ ಪಡೆಯುವವರು ವಿಶ್ರಾಂತಿ ಪಡೆಯಬಹುದು. ಮಧ್ಯಾಹ್ನ ಊಟದ ನಂತರ ಹೈದ್ರಾಬಾದ್‌ನಿಂದ ಶಿವಮೊಗ್ಗದ ಕಡೆಗೆ ಪ್ರಯಾಣ ಮಾಡುವುದು.

Reviews

There are no reviews yet.

From
14,000.00
Enquiry From
0
0.00
Available:
Total:
0
0.00