Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ಕಾಶಿ, ನೇಪಾಳ 12 ದಿನಗಳ ಪ್ರವಾಸ

ಸಂದರ್ಶಿಸುವ ಸ್ಥಳಗಳು: 

ಕಾಶಿ ಜ್ಯೋತಿರ್ಲಿಂಗ, ಪ್ರಯಾಗ್ ರಾಜ್ (ಅಲಹಾಬಾದ್), ಅಯೋಧ್ಯ, ಸೋನಾಲಿ ಬಾರ್ಡರ್ (ನೇಪಾಳ್  ಬಾರ್ಡರ್), ಕಠ್ಮಂಡು, ಮನೋಕಾಮನ, ಪೋಕ್ರಾ, ಗೋರಖ್ ಪುರ್, ಪಶುಪತಿನಾಥ

  • ಅಸಕ್ತರು ರೂ, 10,000/- ಅಡ್ವಾನ್ಸ್ ಹಣ ಸಲ್ಲಿಸಿ ತಮ್ಮ ಸೀಟು ಕಾದಿರಿಸಿಕೊಂಡು ಬಾಕಿ ಹಣ 15 ದಿನಗಳ ಮುಂಚೆ ಪೂರ್ತಿ ಹಣ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು. ಯಾತ್ರಿಕರು ಸ್ಕೂಲ್ ಸರ್ಟಿಫಿಕೇಟ್/ ಡಿ ಎಲ್/ರೇಷನ್‌ಕಾರ್ಡ್/ಅಥವಾ ಎಲೆಕ್ಷನ್ ಐ ಡಿ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರತಕ್ಕದ್ದು
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ನೈಸರ್ಗಿಕ ಕಾರಣಗಳಿಂದ ಪ್ರಯಾಣ ವಿಳಂಬವಾದಲ್ಲಿ ಅಥವಾ ಸಂದರ್ಶನ ಸಮಯದಲ್ಲಿ ಯಾತ್ರಿಕರಿಂದ ವಿಳಂಬವಾಗಿ ಈ ಕಾರಣದಿಂದ ಯಾವುದಾದರೂ ಸಂದರ್ಶನ ಲಭ್ಯವಾಗದಿದ್ದಲ್ಲಿ ವ್ಯವಸ್ಥಾಪಕರು ಜವಾಬ್ದಾರರಲ್ಲ ಇದರ ಬಗ್ಗೆ ಯಾವುದೇ ದೂರು ಸಲ್ಲದು. ಪ್ರಯಾಣ ಸಮಯದಲ್ಲಿ ಇಚ್ಚಿಸಿದ ಸೀಟುಗಳಿಗೆ ಅವಕಾಶವಿರುವುದಿಲ್ಲ. ಬಸ್ಸಿನಲ್ಲಿ ಪ್ರತಿನಿತ್ಯ ಸೀಟುಗಳನ್ನು ಬದಲಾಗಿಸಲಾಗುವುದು.  ರೈಲಿನಲ್ಲಿ ಮಾತ್ರ ಕಂಪ್ಯೂಟರ್ ಮುಖಾಂತರ ಲಭ್ಯವಿರುವ ಸೀಟುಗಳನ್ನು ಕಡ್ಡಾಯವಾಗಿ ಪಡೆಯಬೇಕು.
  • ಯಾವುದೇ ಕಾರಣದಿಂದ ತಮ್ಮ ಸೀಟುಗಳನ್ನು ರದ್ದುಪಡಿಸಿದಲ್ಲಿ ಯಾವುದೇ ರಿಫಂಡ್ ಇರುವುದಿಲ್ಲ.
  • ಮೇಲ್ಕಂಡ ವಿಶೇಷ ಯಾತ್ರೆಯು ಲಾಭ-ನಷ್ಟ ರಹಿತವಾದ ಸಮಾಜಿಕ ಸ್ವಯಂ ಸೇವಾ ಕಾರ್ಯಕ್ರಮವಾಗಿದ್ದು ಯಾತ್ರಿಕರು ಹೆಚ್ಚಿನ ಸೌಲಭ್ಯ ನಿರೀಕ್ಷಿಸದೇ ಆಯೋಜಕರಿಗೆ ಸಹಕರಿಸಬೇಕಾಗಿ ವಿನಂತಿ.

Included/Excluded

  • ಬೆಳಿಗ್ಗೆ ಕಾಫಿ / ಟೀ ಬೆಳಗಿನ ಉಪಹಾರ, ಎರಡು ಊಟ ಮತ್ತು ರಾತ್ರಿ ತಂಗಲು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು.
  • ಯಾತ್ರಿಕರು ಬಟ್ಟೆ, ಊಟದ ತಟ್ಟೆ / ಲೋಟ, ಬೆಡ್‌ಶೀಟ್, ಮತ್ತು ಗಾಳಿ ತಲೆದಿಂಬು, ಅಗತ್ಯ ಔಷದಿ, ಬೀಗ ಮತ್ತು ಸಣ್ಣ ಟಾರ್ಚು, ಮತ್ತು ಹೊದಿಕೆ ಶಾಲನ್ನು ತರಬೇಕು ಹೆಚ್ಚಿಗೆ ಲಗೇಜನ್ನು ತರಬಾರದು, ಎಲ್ಲಾ ಕಡೆ ಪ್ರವೇಶದರ, ದೋಣಿ, ರೀಕ್ಷಾ, ಸಣ್ಣಜೀಪುಗಳು ಇತ್ಯಾದಿ ಖರ್ಚುಗಳನ್ನು ಆಯೋಜಕರಿಂದಲೇ ಭರಿಸಲಾಗುವುದು.
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ಬೆಲೆ ಬಾಳುವ ಒಡವೆಗಳು ಮತ್ತು ಹೆಚ್ಚಿನ ಹಣ ತರಬಾರದು ಯಾವುದೇ ವಸ್ತು, ಹಣ, ಒಡವೆ, ಇತ್ಯಾದಿ ಕಳೆದು ಹೋದಲ್ಲಿ ಆಯೋಜಕರು ಜವಾಬ್ದಾರರಲ್ಲ ಎಲ್ಲಾ ಕಡೆ ಎ.ಟಿ.ಎಂ. ವ್ಯವಸ್ಥೆ ಇರುತ್ತದೆ. ಇದರ ಸೌಲಭ್ಯವನ್ನು ನಮ್ಮ ಮುಖಾಂತರ ಬಳಸಿಕೊಳ್ಳಬಹುದಾಗಿದೆ

Tour Plan

ದಿನ 1

ಬೆಂಗಳೂರು ವಿಮಾನ ನಿಲ್ದಾಣದಿಂದ ಲಖನೌಗೆ ವಿಮಾನದಲ್ಲಿ ಪ್ರಯಾಣ ಮಾಡುವುದು ಲಖನೌ ತಲುಪಿ ನಂತರ ಅಯೋಧ್ಯೆಗೆ ಪ್ರಯಾಣ ಮಾಡಿ ರಾತ್ರಿ ವಿಶ್ರಾಂತಿ ಪಡೆಯುವುದು.

ದಿನ 2

ಬೆಳಿಗ್ಗೆ ಹೊರಟು ರಾಮ ಜನ್ಮ ಭೂಮಿ, ದಶರಥ ಮಹಲ್, ಸರಾಯು ನದಿ, ಹನುಮಾನ್ ಗದ್ದಿ ವೀಕ್ಷಣೆ ನಂತರ ರಾತ್ರಿ ಸೋನಾಲಿ ಬಾರ್ಡರ್‌ನಲ್ಲಿ ವಿಶ್ರಾಂತಿ ಪಡೆಯುವುದು

ದಿನ 3

ಬೆಳಿಗ್ಗೆ ಲುಂಬಿನಿಗೆ ಪ್ರಯಾಣ ಮಾಡಿ ಲುಂಬಿನಿಯಲ್ಲಿರುವ ಬುದ್ಧನ ಜನ್ಮ ಸ್ಥಳ ವೀಕ್ಷಣೆ ಮಾಡಿ ಪೋಕ್ರಾದಲ್ಲಿ ರಾತ್ರಿ ವಿಶ್ರಾಂತಿ ಪಡೆಯುವುದು..

ದಿನ 4

ಬೆಳಿಗ್ಗೆ ಹೊರಟು ಬಿದ್ಯಾ ಬಾಸಿನಿ, ಡೇವಿಸ್ ಫಾಲ್ಸ್, ಗುಪ್ತೇಶ್ವರ ಗುಹೆ, ಪೇವಾ ಲೇಕ್ ವೀಕ್ಷಣೆ ನಂತರ ರಾತ್ರಿ ಪೋಕ್ರಾದಲ್ಲಿ ವಿಶ್ರಾಂತಿ ಪಡೆಯುವುದು.

ದಿನ 5

ಬೆಳಿಗ್ಗೆ 6.00 ಗಂಟೆಗೆ ಹೊರಟು ನೈಸರ್ಗಿಕ ಪರ್ವತಗಳನ್ನು ವೀಕ್ಷಣೆ ಮಾಡುತ್ತಾ ನೇಪಾಳದ ರಾಜಧಾನಿ ಕಠ್ಮಂಡುದಲ್ಲಿ ರಾತ್ರಿ ವಿಶ್ರಾಂತಿ ಪಡೆಯುವುದು.

ದಿನ 6

ಬೆಳಿಗ್ಗೆ ಹೊರಟು ಚರ್ತುಮುಖದ ಪಶುಪತಿನಾಥನ ದರ್ಶನ ಪಡೆದು ನಂತರ ಜಲನಾರಾಯಣ, ಡೋಲೇಶ್ವರ ಶಿವನ ಶಿರೋಭಾಗ ಹಾಗೂ 127 ಅಡಿ ಶಿವನಮೂರ್ತಿ ಸಾಗ ಕ್ಷೇತ್ರ ಇನ್ನೂ ಮುಂತಾದ ಕ್ಷೇತ್ರಗಳನ್ನು ವೀಕ್ಷಣೆ ಮಾಡಿ ನಂತರ ಕಠ್ಮಂಡುವಿನಲ್ಲಿ ವಿಶ್ರಾಂತಿ ಪಡೆಯುವುದು.

ದಿನ 7

ಬೆಳಿಗ್ಗೆ 5.00 ಗಂಟೆಗೆ ಹೊರಟು ಮನೋಕಾಮನೆಗೆ ಪ್ರಯಾಣ ಮಾಡಿ, ರೋಪ್‌ವೇ (ಸಮುದ್ರಮಟ್ಟಕ್ಕಿಂತ 1300 ಅಡಿ ಎತ್ತರ) ಮುಖಾಂತರ ಮನೋಕಾಮನ ದೇವಿ ದರ್ಶನ ಪಡೆದು ರಾತ್ರಿ ಸೋನಾಲಿ ಬಾರ್ಡ್ರ್‌ನಲ್ಲಿ ವಿಶ್ರಾಂತಿ ಪಡೆಯುವುದು.

ದಿನ 8

ಬೆಳಿಗ್ಗೆ ಹೊರಟು ಗೊರಖ್‌ಪುರ ತಲುಪಿ, ಗೋರಖ್‌ನಾಥ್ ಮಂದಿರ, ವೀಕ್ಷಣೆ ಮಾಡಿ ನಂತರ ವಾರಣಾಸಿಗೆ ಪ್ರಯಾಣ ಮಾಡಿ ವಿಶ್ರಾಂತಿ ಪಡೆಯುವುದು.

ದಿನ 9

ಬೆಳಿಗ್ಗೆ ಹೊರಟು ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದರ್ಶನ ಪಡೆದು, ಸಾಕ್ಷಿ ಗಣಪತಿ ಅನ್ನಪೂರ್ಣ, ಕಾಶಿ ವಿಶಾಲಾಕ್ಷಿ ದರ್ಶನ ಪಡೆದು ನಂತರ ಉಪಹಾರ ಮಾಡಿಕೊಂಡು ಜೀಪ್‌ನಲ್ಲಿ ತೆರಳಿ ಕಾಶಿಯಲ್ಲಿರುವ ಕಾಲಭೈರವ, ಸಂಕಟ ಮೋಚನ, ಕವಡೆ ಮಾತಾ, ತುಳಸಿ ಮಾನಸ ಮಂದಿರ, ಬಿರ್ಲಾ ಮಂದಿರ, ವಾರಣಾಸಿ ವಿಶ್ವ ವಿದ್ಯಾಲಯ (ಹೊರನೋಟ) ವೀಕ್ಷಣೆ ಸಂಜೆ 4.00 ಗಂಟೆಗೆ ತೆರಳಿ ಕಾಶಿಯಲ್ಲಿರುವ ಎಲ್ಲಾ ಘಾಟ್‌ಗಳನ್ನು ನೋಡಿಕೊಂಡು ಗಂಗಾ ನದಿಯಲ್ಲಿ ಸ್ನಾನಮಾಡಿ ನಂತರ ಬೋಟಿನಲ್ಲಿ ಕುಳಿತು ಜಗತ್ ಪ್ರಸಿದ್ಧ ಗಂಗಾರತಿಯನ್ನು ನೋಡಿಕೊಂಡು ರಾತ್ರಿ ಕಾಶಿಯಲ್ಲ್ಲಿ ವಿಶ್ರಾಂತಿ.

ದಿನ 10

ಬೆಳಿಗ್ಗೆ ಅಲಹಾಬಾದ್‌ಗೆ ಪ್ರಯಾಣ ಮಾಡಿ ನಂತರ ತ್ರೀವೇಣಿ ಸಂಗಮ (ಗಂಗಾ ಯಮುನ ಸರಸ್ವತಿ)ದಲ್ಲಿ ಸ್ನಾನ ನಂತರ ಮಲಗಿರುವ ಹನುಮಾನ್ ದೇವಸ್ಥಾನ ದರ್ಶನ ಆನಂದ ಭವನ(ನೆಹರು ಮನೆ) ವೀಕ್ಷಣೆ ಮಾಡಿ ರಾತ್ರಿ ಅಲಹಾಬಾದ್‌ನಲ್ಲಿ ವಿಶ್ರಾಂತಿ.

Reviews

There are no reviews yet.

From
49,000.00
Enquiry From
0
0.00
Available:
Total:
0
0.00