Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ಕೇರಳ ಪ್ರವಾಸ -7 ದಿನಗಳು

ಸಂದರ್ಶಿಸುವ ಸ್ಥಳಗಳು: 

ಗುರುವಾಯೂರು, ಅತ್ತಿರಪಲ್ಲಿ ಫಾಲ್ಸ್, ಆಲಪ್ಪಿ, ತಿರುವನಂತಪುರಂ, ಅನಂತ ಪದ್ಮನಾಭ ದೇವಸ್ಥಾನ, ಕೋವಲಂ ಬೀಚ್

  • ಆಸಕ್ತರು ರೂ, 5,000/- ಅಡ್ವಾನ್ಸ್ ಹಣ ಸಲ್ಲಿಸಿ ತಮ್ಮ ಸೀಟು ಕಾದಿರಿಸಿಕೊಂಡು ಬಾಕಿ ಹಣ 15 ದಿನಗಳ ಮುಂಚೆ ಪೂರ್ತಿ ಹಣ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು. ಯಾತ್ರಿಕರು ಎಲೆಕ್ಷನ್ ಐ ಡಿ/ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರತಕ್ಕದ್ದು.
  • ನೈಸರ್ಗಿಕ ಕಾರಣಗಳಿಂದ ಪ್ರಯಾಣ ವಿಳಂಬವಾದಲ್ಲಿ ಅಥವಾ ಸಂದರ್ಶನ ಸಮಯದಲ್ಲಿ ಯಾತ್ರಿಕರಿಂದ ವಿಳಂಬವಾಗಿ ಈ ಕಾರಣದಿಂದ ಯಾವುದಾದರೂ ಸಂದರ್ಶನ ಲಭ್ಯವಾಗದಿದ್ದಲ್ಲಿ ವ್ಯವಸ್ಥಾಪಕರು ಜವಾಬ್ದಾರರಲ್ಲ ಇದರ ಬಗ್ಗೆ ಯಾವುದೇ ದೂರು ಸಲ್ಲದು. ಪ್ರಯಾಣ ಸಮಯದಲ್ಲಿ ಇಚ್ಚಿಸಿದ ಸೀಟುಗಳಿಗೆ ಅವಕಾಶವಿರುವುದಿಲ್ಲ. ಬಸ್ಸಿನಲ್ಲಿ ಪ್ರತಿನಿತ್ಯ ಸೀಟುಗಳನ್ನು ಬದಲಾಗಿಸಲಾಗುವುದು.  ರೈಲಿನಲ್ಲಿ ಮಾತ್ರ ಕಂಪ್ಯೂಟರ್ ಮುಖಾಂತರ ಲಭ್ಯವಿರುವ ಸೀಟುಗಳನ್ನು ಕಡ್ಡಾಯವಾಗಿ ಪಡೆಯಬೇಕು.
  • ಯಾವುದೇ ಕಾರಣದಿಂದ ತಮ್ಮ ಸೀಟುಗಳನ್ನು ರದ್ದುಪಡಿಸಿದಲ್ಲಿ ಯಾವುದೇ ರಿಫಂಡ್ ಇರುವುದಿಲ್ಲ.
  • ಮೇಲ್ಕಂಡ ವಿಶೇಷ ಯಾತ್ರೆಯು ಲಾಭ-ನಷ್ಟ ರಹಿತವಾದ ಸಮಾಜಿಕ ಸ್ವಯಂ ಸೇವಾ ಕಾರ್ಯಕ್ರಮವಾಗಿದ್ದು ಯಾತ್ರಿಕರು ಹೆಚ್ಚಿನ ಸೌಲಭ್ಯ ನಿರೀಕ್ಷಿಸದೇ ಆಯೋಜಕರಿಗೆ ಸಹಕರಿಸಬೇಕಾಗಿ ವಿನಂತಿ.

Included/Excluded

  • ಬೆಳಿಗ್ಗೆ ಕಾಫಿ / ಟೀ ಬೆಳಗಿನ ಉಪಹಾರ, ಎರಡು ಊಟ ಮತ್ತು ರಾತ್ರಿ ತಂಗಲು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು.
  • ಯಾತ್ರಿಕರು ಬಟ್ಟೆ, ಊಟದ ತಟ್ಟೆ / ಲೋಟ, ಬೆಡ್‌ಶೀಟ್, ಮತ್ತು ಗಾಳಿ ತಲೆದಿಂಬು, ಅಗತ್ಯ ಔಷದಿ, ಬೀಗ ಮತ್ತು ಸಣ್ಣ ಟಾರ್ಚು, ಮತ್ತು ಹೊದಿಕೆ ಶಾಲನ್ನು ತರಬೇಕು ಹೆಚ್ಚಿಗೆ ಲಗೇಜನ್ನು ತರಬಾರದು, ಎಲ್ಲಾ ಕಡೆ ಪ್ರವೇಶದರ, ದೋಣಿ, ರೀಕ್ಷಾ, ಸಣ್ಣಜೀಪುಗಳು ಇತ್ಯಾದಿ ಖರ್ಚುಗಳನ್ನು ಆಯೋಜಕರಿಂದಲೇ ಭರಿಸಲಾಗುವುದು.
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ಬೆಲೆ ಬಾಳುವ ಒಡವೆಗಳು ಮತ್ತು ಹೆಚ್ಚಿನ ಹಣ ತರಬಾರದು ಯಾವುದೇ ವಸ್ತು, ಹಣ, ಒಡವೆ, ಇತ್ಯಾದಿ ಕಳೆದು ಹೋದಲ್ಲಿ ಆಯೋಜಕರು ಜವಾಬ್ದಾರರಲ್ಲ ಎಲ್ಲಾ ಕಡೆ ಎ.ಟಿ.ಎಂ. ವ್ಯವಸ್ಥೆ ಇರುತ್ತದೆ. ಇದರ ಸೌಲಭ್ಯವನ್ನು ನಮ್ಮ ಮುಖಾಂತರ ಬಳಸಿಕೊಳ್ಳಬಹುದಾಗಿದೆ

Tour Plan

1ನೇ ದಿನ

ಸಂಜೆ 7:30ಕ್ಕೆ ಸರಿಯಾಗಿ ಸಿಂಧನೂರಿನಿಂದ ರಾಯಚೂರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡಿ ರಾಯಚೂರಿನಿಂದ ರಾತ್ರಿ 11.30ಕ್ಕೆ ಹೊರಡುವ ಬಸವ ಎಕ್ಸ್ಪ್ರೆಸ್ ರೈಲಿನಲ್ಲಿ ಮೈಸೂರಿಗೆ ಪ್ರಯಾಣಿಸಿ ರಾತ್ರಿ ಮೈಸೂರಿನ ಸುತ್ತೂರು ಮಠದಲ್ಲಿ ತಂಗುವುದು.

2ನೇ ದಿನ

ಬೆಳಿಗ್ಗೆ 5.00 ಗಂಟೆಗೆ ವೈನಾಡಿಗೆ ಪ್ರಯಾಣ ಮಾಡಿ, ವೈನಾಡಲ್ಲಿ ಪುಕಲ್ ಲೇಕ್, ಎಡಕಲ್ ಗುಹೆಗಳು, ಹಾಗು ರಮಣೀಯ ಜಲಪಾತಗಳನ್ನು ವೀಕ್ಷಿಸಿದ ನಂತರ ಗುರುವಾಯೂರಿಗೆ ತೆರಳಿ ಗುರುವಾಯೂರಿನಲ್ಲಿ ತಂಗುವುದು.

3ನೇ ದಿನ

ಬೆಳಿಗ್ಗೆ 5.00 ಗಂಟೆಗೆ ಗುರುವಾಯೂರಿನಲ್ಲಿ ಶ್ರೀ ಕೃಷ್ಣ ದೇವರ ದರ್ಶನ ಪಡೆದು ನಂತರ ಅಲ್ಲಿರುವ ಆನೆ ಬಿಡಾರ, ಆದಿ ಶಂಕರಚಾರ್ಯರು ಜನಿಸಿದ ಪವಿತ್ರ ಸ್ಥಳವಾದ ಕಾಲಾಡಿಯಲ್ಲಿರುವ ಶಂಕರಾಚಾರ್ಯ ಶಾರದಾ ಪೀಠವನ್ನು ವೀಕ್ಷಣೆ ಮಾಡಿದ ನಂತರ ಅತ್ತಿರಿಪಲ್ಲಿಯಲ್ಲಿರುವ ಜಲಪಾತ ವೀಕ್ಷಣೆ ಮಾಡಿದ ನಂತರ ಮುನ್ನಾರ್‌ಗೆ ತೆರಳಿ ಅಲ್ಲಿನ ಪ್ರಸಿದ್ಧ ಮುನ್ನಾರ ಫಾಲ್ಸ್ ಹಾಗು ರಮಣೀಯ ಪ್ರಕೃತಿ ಸೌಂದರ್ಯವನ್ನು ವೀಕ್ಷಣೆ ಮಾಡಿದ ನಂತರ ರಾತ್ರಿ ಮುನ್ನಾರಿನಲ್ಲಿ ತಂಗುವುದು.

4ನೇ ದಿನ

ಬೆಳಿಗ್ಗೆ 6.00 ಗಂಟೆಗೆ ಮುನ್ನಾರ್‌ನಲ್ಲಿರುವ ಸುಂದರ ಗಿರಿಧಾಮಗಳು, ಸಾಲು ಸಾಲು ಹಸಿರುವ ಬೆಟ್ಟಗಳು, ಚಹಾ ತೋಟಗಳು, ವಿಶಿಷ್ಠವಾದ ಮೋಟೀಸ್ ಶೋಲಾ ಹುಲ್ಲುಗಾವಲುಗಳು ಹಾಗು ಇನ್ನೀತರೆ ಸೈಡ್ ಸೀನ್‌ಗಳ ವೀಕ್ಷಣೆ ನಂತರ ತ್ರಿವೇಂಡ್ರಂಗೆ ಪ್ರಯಾಣ ಮಾಡಿ ತ್ರಿವೇಂಡ್ರಂನಲ್ಲಿ ತಂಗುವುದು.

5ನೇ ದಿನ

ಬೆಳಿಗ್ಗೆ 6.00 ಗಂಟೆಗೆ ಹೊರಟು ತಿರುವನಂತಪುರದಲ್ಲಿರುವ ಸುಪ್ರಸಿದ್ದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ, ಅರಮನೆಗಳ ವೀಕ್ಷಣೆ, ಪ್ರಾಣಿ ಸಂಗ್ರಾಹಾಲಯ, ಬೀಚ್‌ಗಳನ್ನು ವೀಕ್ಷಣೆ ಮಾಡಿ ನಂತರ ಜಗತ್ತಿನ ಅತೀ ದೊಡ್ಡ ಜಟಾಯು ಪ್ರತಿಮೆ ವೀಕ್ಷಿಸಿದ ನಂತರ ಆಲೆಪ್ಪಿಗೆ ಪ್ರಯಾಣಿಸಿ ಅಲೆಪ್ಪಿಯಲ್ಲಿ ತಂಗುವುದು.

6ನೇ ದಿನ

ಬೆಳಿಗ್ಗೆ 6.00 ಗಂಟೆಗೆ ಹೊರಟು ಆಲೆಪ್ಪಿಯಲ್ಲಿ ಬೋಟಿಂಗ್ ಮಾಡಿ, ಬ್ಯಾಕ್ ವಾಟರ್, ಅಲೆಪ್ಪಿ ಹೌಸ್ ಬೋಟ್‌ಗಳ ವೀಕ್ಷಣೆ, ವೈವಿಧ್ಯಮಯ ಪಕ್ಷಿಗಳ ವೀಕ್ಷಣೆ, ಮನೋಹರವಾದ ಸರೋವರಗಳನ್ನು ವೀಕ್ಷಿಸಿ ನಂತರ ಚೂಟಾನಿಕೆರೆಗೆ ತೆರಳುವುದು. ಚೂಟಾನಿಕೆರೆಯಲ್ಲಿರುವ ಪ್ರಸಿದ್ಧ ಭಗವತಿ ದೇವಸ್ಥಾನ ವೀಕ್ಷಣೆ ನಂತರ ಕೊಚ್ಚಿನ್À ಕಡೆಗೆ ಪ್ರಯಾಣ ಮಾಡಿ, ಕೊಚ್ಚಿಯಲ್ಲಿರುವ ಪ್ಯಾಲೇಸ್‌ಗಳು, ಕೊಚ್ಚಿ ಕೋಟೆ, ಬೀಚ್‌ಗಳು, ಮೀನುಗಾರಿಕೆಯನ್ನು ವೀಕ್ಷಿಸಿದ ನಂತರ ಭಾರತದಲ್ಲಿಯೇ ಅತಿ ದೊಡ್ಡ ಲುಲು ಮಾಲ್‌ನಲ್ಲಿ ಶಾಪಿಂಗ್ ನಂತರ ಮೈಸೂರಿನ ಮೂಲಕ ಪ್ರಯಾಣಿಸಿ ಬೆಂಗಳೂರು ತಲುಪುವುದು. ಬೆಂಗಳೂರಿನಿAದ ರಾತ್ರಿ 11.00 ಗಂಟೆಗೆ ಹೊರಡುವ ರೈಲು ಗಾಡಿ ಸಂಖ್ಯೆ: 16593 ಹಜೂರ್ ಸಾಹಿಬ್ ನಾದೇಡ್ ಎಕ್ಸ್ಪ್ರೆಸ್‌ನಲ್ಲಿ ರಾಯಚೂರು ತಲುಪುವುದು.

7ನೇ ದಿನ

ರಾಯಚೂರಿನಿಂದ – ಸಿಂಧನೂರಿಗೆ ಬಸ್ಸಿನಲ್ಲಿ ಪ್ರಯಾಣಿಸುವುದು. ಸಿಂಧನೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವುದು.

Reviews

There are no reviews yet.

From
18,000.00
Enquiry From
0
0.00
Available:
Total:
0
0.00