Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ಚಾರ್ ಧಾಮ್ ಪ್ರವಾಸ -13 ದಿನಗಳು

ಸಂದರ್ಶಿಸುವ ಸ್ಥಳಗಳು: 

ಕೇದಾರನಾಥ್ ಜ್ಯೋತಿರ್ಲಿಂಗ, ದೆಹಲಿ, ಹರಿದ್ವಾರ, ಋಷಿಕೇಶ, ಉತ್ತರಕಾಶಿ, ಯಮುನೋತ್ರಿ, ಗಂಗೋತ್ರಿ, ಗುಪ್ತಕಾಶಿ, ಬದ್ರಿನಾಥ್.

  • ಆಸಕ್ತರು ರೂ, 15,000/- ಅಡ್ವಾನ್ಸ್ ಹಣ ಸಲ್ಲಿಸಿ ತಮ್ಮ ಸೀಟು ಕಾದಿರಿಸಿಕೊಂಡು ಬಾಕಿ ಹಣ 15 ದಿನಗಳ ಮುಂಚೆ ಪೂರ್ತಿ ಹಣ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು. ಯಾತ್ರಿಕರು ಎಲೆಕ್ಷನ್ ಐ ಡಿ/ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರತಕ್ಕದ್ದು
  • ನಮ್ಮ ಪ್ರವಾಸದ ಪ್ಯಾಕೇಜ್ ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೆ  ಬಸ್ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ, ರೈಲು ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ಮಾತ್ರ ಇರುತ್ತದೆ. ವಿಮಾನ ನಿಲ್ದಾಣಕ್ಕೆ ತಲುಪಿಸುವ ಬಸ್ಸಿನ ವ್ಯವಸ್ಥೆ ಬೇಕಾಗಿದ್ದÀಲ್ಲಿ ಅದರ ದರವನ್ನು ಯಾತ್ರಿಕರೇ ಭರಿಸತಕ್ಕದ್ದು.
  • ನೈಸರ್ಗಿಕ ಕಾರಣಗಳಿಂದ ಪ್ರಯಾಣ ವಿಳಂಬವಾದಲ್ಲಿ ಅಥವಾ ಸಂದರ್ಶನ ಸಮಯದಲ್ಲಿ ಯಾತ್ರಿಕರಿಂದ ವಿಳಂಬವಾಗಿ ಈ ಕಾರಣದಿಂದ ಯಾವುದಾದರೂ ಸಂದರ್ಶನ ಲಭ್ಯವಾಗದಿದ್ದಲ್ಲಿ ವ್ಯವಸ್ಥಾಪಕರು ಜವಾಬ್ದಾರರಲ್ಲ ಇದರ ಬಗ್ಗೆ ಯಾವುದೇ ದೂರು ಸಲ್ಲದು. ಪ್ರಯಾಣ ಸಮಯದಲ್ಲಿ ಇಚ್ಚಿಸಿದ ಸೀಟುಗಳಿಗೆ ಅವಕಾಶವಿರುವುದಿಲ್ಲ. ಬಸ್ಸಿನಲ್ಲಿ ಪ್ರತಿನಿತ್ಯ ಸೀಟುಗಳನ್ನು ಬದಲಾಗಿಸಲಾಗುವುದು.  ರೈಲಿನಲ್ಲಿ ಮಾತ್ರ ಕಂಪ್ಯೂಟರ್ ಮುಖಾಂತರ ಲಭ್ಯವಿರುವ ಸೀಟುಗಳನ್ನು ಕಡ್ಡಾಯವಾಗಿ ಪಡೆಯಬೇಕು.
  • ಯಾವುದೇ ಕಾರಣದಿಂದ ತಮ್ಮ ಸೀಟುಗಳನ್ನು ರದ್ದುಪಡಿಸಿದಲ್ಲಿ ಯಾವುದೇ ರಿಫಂಡ್ ಇರುವುದಿಲ್ಲ.
  • ಮೇಲ್ಕಂಡ ವಿಶೇಷ ಯಾತ್ರೆಯು ಲಾಭ-ನಷ್ಟ ರಹಿತವಾದ ಸಮಾಜಿಕ ಸ್ವಯಂ ಸೇವಾ ಕಾರ್ಯಕ್ರಮವಾಗಿದ್ದು ಯಾತ್ರಿಕರು ಹೆಚ್ಚಿನ ಸೌಲಭ್ಯ ನಿರೀಕ್ಷಿಸದೇ ಆಯೋಜಕರಿಗೆ ಸಹಕರಿಸಬೇಕಾಗಿ ವಿನಂತಿ.

Included/Excluded

  • ಬೆಳಿಗ್ಗೆ ಕಾಫಿ / ಟೀ ಬೆಳಗಿನ ಉಪಹಾರ, ಎರಡು ಊಟ ಮತ್ತು ರಾತ್ರಿ ತಂಗಲು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು.
  • ಯಾತ್ರಿಕರು ಬಟ್ಟೆ, ಊಟದ ತಟ್ಟೆ / ಲೋಟ, ಬೆಡ್‌ಶೀಟ್, ಮತ್ತು ಗಾಳಿ ತಲೆದಿಂಬು, ಅಗತ್ಯ ಔಷದಿ, ಬೀಗ ಮತ್ತು ಸಣ್ಣ ಟಾರ್ಚು, ಮತ್ತು ಹೊದಿಕೆ ಶಾಲನ್ನು ತರಬೇಕು ಹೆಚ್ಚಿಗೆ ಲಗೇಜನ್ನು ತರಬಾರದು, ಎಲ್ಲಾ ಕಡೆ ಪ್ರವೇಶದರ, ದೋಣಿ, ರೀಕ್ಷಾ, ಸಣ್ಣಜೀಪುಗಳು ಇತ್ಯಾದಿ ಖರ್ಚುಗಳನ್ನು ಆಯೋಜಕರಿಂದಲೇ ಭರಿಸಲಾಗುವುದು.
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ಬೆಲೆ ಬಾಳುವ ಒಡವೆಗಳು ಮತ್ತು ಹೆಚ್ಚಿನ ಹಣ ತರಬಾರದು ಯಾವುದೇ ವಸ್ತು, ಹಣ, ಒಡವೆ, ಇತ್ಯಾದಿ ಕಳೆದು ಹೋದಲ್ಲಿ ಆಯೋಜಕರು ಜವಾಬ್ದಾರರಲ್ಲ ಎಲ್ಲಾ ಕಡೆ ಎ.ಟಿ.ಎಂ. ವ್ಯವಸ್ಥೆ ಇರುತ್ತದೆ. ಇದರ ಸೌಲಭ್ಯವನ್ನು ನಮ್ಮ ಮುಖಾಂತರ ಬಳಸಿಕೊಳ್ಳಬಹುದಾಗಿದೆ

Tour Plan

1ನೇ ದಿನ

ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಮಾಡಿ ನಂತರ ಬಸ್ಸಿನಲ್ಲಿ ಹರಿದ್ವಾರಕ್ಕೆ ಪ್ರಯಾಣ ಮಾಡಿ ರಾತ್ರಿ ವಿಶ್ರಾಂತಿ

2ನೇ ದಿನ

ಬೆಳಿಗ್ಗೆ 06.00 ಗಂಟೆಗೆ ಹೊರಟು ಹಿಮಾಲಯದ ನೈಸರ್ಗಿಕ ಪರ್ವತಗಳ ಸೌಂದರ್ಯವನ್ನು ವೀಕ್ಷಿಸುತ್ತಾ, ರಾತ್ರಿ ಗುಪ್ತಕಾಶಿಯಲ್ಲಿ ವಿಶ್ರಾಂತಿ.

3ನೇ ದಿನ

ಬೆಳಿಗ್ಗೆ 05.00 ಗಂಟೆಗೆ ಕುದುರೆ, ಡೋಲಿ ಕಾಲ್ನಡಿಗೆ, ಹೆಲಿಕಾಪ್ಟರ್ ಮುಖಾಂತರ (ಇದರ ಎಲ್ಲಾ ಖರ್ಚುಗಳು ನಿಮ್ಮದಾಗಿರುತ್ತದೆ) ಹೊರಟು ಶ್ರೀ ಕೇದಾರೇಶ್ವರ (ಜ್ಯೋತಿರ್ಲಿಂಗ) ದರ್ಶನ ಮಾಡಿಕೊಂಡು ಗುಪ್ತಕಾಶಿಯಲ್ಲಿ ವಿಶ್ರಾಂತಿ .

4ನೇ ದಿನ

ಗುಪ್ತಕಾಶಿಯಲ್ಲಿ ವಿಶ್ರಾಂತಿ

5ನೇ ದಿನ

ಬೆಳಿಗ್ಗೆ 06.00 ಗಂಟೆಗೆ ಬಸ್ಸಿನಲ್ಲಿ ಹೊರಟು ಊಖಿಮಠ (ಕೇದಾರಪೀಠದ ಮಠ) ದರ್ಶನ ಮಾಡಿಕೊಂಡು ಹಿಮಾಲಯದ ನೈಸರ್ಗಿಕ ಪರ್ವತಗಳ ಸೌಂದರ್ಯವನ್ನು ವೀಕ್ಷಿಸುತ್ತಾ ರಾತ್ರಿ ಪಿಪ್ಪಲ್‌ಕೋಟೆಯಲ್ಲಿ ವಿಶ್ರಾಂತಿ.

6ನೇ ದಿನ

ಬೆಳಿಗ್ಗೆ 05.00 ಗಂಟೆಗೆ ಬಸ್ಸಿನಲ್ಲಿ ಹೊರಟು ಬದರೀನಾಥದಲ್ಲಿರುವ ತಪ್ತಕುಂಡ, ಬಿಸಿನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿಕೊಂಡು ಬದರೀನಾರಾಯಣನ ದರ್ಶನ ಪಡೆದು ಭಾರತದ ಕಟ್ಟಕಡೆಯ ಹಳ್ಳಿ ಮಾಣಾದಲ್ಲಿ ವ್ಯಾಸಗುಹೆ, ಸರಸ್ವತಿ ನದಿಯ ಉಗಮ ಸ್ಥಾನ (ಪಾಂಡವರು ಸ್ನಾನ ಮಾಡಿದ ಸ್ಥಳ) ಭೀಮ ಬಂಡೆಯನ್ನು ನೋಡಿಕೊಂಡು ರಾತ್ರಿ ಪಿಪ್ಪಲ್‌ಕೋಟೆಯಲ್ಲಿ ವಿಶ್ರಾಂತಿ.

7ನೇ ದಿನ

ಬೆಳಿಗ್ಗೆ 07.00 ಗಂಟೆಗೆ ಬಸ್ಸಿನಲ್ಲಿ ಹೊರಟು ಹಿಮಾಲಯದ ನೈಸರ್ಗಿಕ ಪರ್ವತಗಳ ಸೌಂದರ್ಯ ವೀಕ್ಷಿಸುತ್ತಾ, ಉತ್ತರಕಾಶಿಯಲ್ಲಿ ಕಾಶಿವಿಶ್ವನಾಥ, ಶಕ್ತಿ ದೇವಸ್ಥಾನ ದರ್ಶನ ಮಾಡಿಕೊಂಡು ರಾತ್ರಿ ಉತ್ತರಕಾಶಿಯಲ್ಲಿ ವಿಶ್ರಾಂತಿ.

8ನೇ ದಿನ

ಬೆಳಿಗ್ಗೆ 05.00 ಗಂಟೆಗೆ ಬಸ್ಸಿನಲ್ಲಿ ಹೊರಟು ಮಾರ್ಗಮಧ್ಯದಲ್ಲಿ ಸಿಗುವ “ಗಂಗಾನಾನಿ” ಬಿಸಿನೀರಿನ ಬುಗ್ಗೆಯಲ್ಲಿ ಸ್ನಾನಮಾಡಿ ಅಲ್ಲಿಂದ ಗಂಗೋತ್ರಿಗೆ ಪ್ರಯಾಣ ಬೆಳೆಸುವುದು, ಭಾಗೀರಥಿ ಉಗಮಸ್ಥಾನ ಹಾಗೂ ಗಂಗಾಮಾತೆ ದರ್ಶನ ಪಡೆದು ರಾತ್ರಿ ಉತ್ತರಕಾಶಿಯಲ್ಲಿ ವಿಶ್ರಾಂತಿ.

9ನೇ ದಿನ

ಬೆಳಗ್ಗೆ 06.00 ಗಂಟೆಗೆ ಹೊರಟು ಹಿಮಾಲಯದ ನೈಸರ್ಗಿಕ ಪರ್ವತಗಳ ಸೌಂದರ್ಯ ವೀಕ್ಷಿಸತ್ತಾ, ರಾತ್ರಿ ಬಾರ್‌ಕೋಡ್‌ನಲ್ಲಿ ವಿಶ್ರಾಂತಿ.

10ನೇ ದಿನ

ಬೆಳಗ್ಗೆ 05.00 ಗಂಟೆಗೆ ಹೊರಟು ಜಾನಕಿಚಿಟ್ಟಿ ತಲುಪಿ ನಂತರ ಯಮುನೋತ್ರಿಗೆ ಹೊರಟು ಇಲ್ಲಿ ವಾಹನ ಸೌಲಭ್ಯ ಇಲ್ಲದ ಕಾರಣ ಪ್ರಯಾಣಿಕರು ನಡೆದು ಕುದುರೆ ಇಲ್ಲವೇ ಡೋಲಿ ಮುಖಾಂತರ ಪ್ರಯಾಣಿಸಬೇಕಾಗುವುದು (ಇದರ ಎಲ್ಲಾ ಖರ್ಚುಗಳು ನಿಮ್ಮದಾಗಿರುತ್ತದೆ) ಇದು ಯಮುನಾ ನದಿಯ ಉಗಮಸ್ಥಾನವಾಗಿದೆ ಇಲ್ಲಿನ ಬಿಸಿನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿ ಯಮುನಾದೇವಿ ದರ್ಶನ ಪಡೆದು ಅಲ್ಲಿಂದ ಹೊರಟು ರಾತ್ರಿ ಬಾರ್‌ಕೋಡ್‌ನಲ್ಲಿ ವಿಶ್ರಾಂತಿ.

11ನೇ ದಿನ

ಬೆಳಿಗ್ಗೆ 06.00 ಗಂಟೆಗೆ ಬಸ್ಸಿನಲ್ಲಿ ಹೊರಟು ರುದ್ರಪ್ರಯಾಗದಲ್ಲಿ ಅಲಕಾನಂದ ಹಾಗೂ ಮಂದಾಕಿನಿ ನದಿಗಳ ಸಂಗಮ ವೀಕ್ಷಣೆ ಮಾಡಿ ನಂತರ ಋಷಿಕೇಷದಲ್ಲಿ ರಾಮೇಶ್ವರ ಮಂದಿರ, ಗೀತಾಶ್ರಮ, ಸ್ವರ್ಗಾಶ್ರಮ, ರಾಮಜೂಲ ವೀಕ್ಷಣೆ ಮಾಡಿಕೊಂಡು ರಾತ್ರಿ ಹರಿದ್ವಾರದಲ್ಲಿ ವಿಶ್ರಾಂತಿ.

12 ನೇ ದಿನ

ಬೆಳಿಗ್ಗೆ 06.00 ಗಂಟೆಗೆ ಹರಿದ್ವಾರದಲ್ಲಿ ಹರ್‌ಕೀಪೌಡಿಯಲ್ಲಿ ಗಂಗಾಸ್ನಾನ ಮಾಡಿಕೊಂಡು ಅಲ್ಲಿಂದ ರೋಪ್‌ವೇ ಮುಖಾಂತರ ಮಾನಸಾದೇವಿ ಇನ್ನೂ ಮುಂತಾದ ದೇವಸ್ಥಾನ ದರ್ಶನ ಮಾಡಿಕೊಂಡು, ನಂತರ ದೆಹಲಿಗೆ ಪ್ರಯಾಣಿಸಿ ಪ್ರಸಿದ್ಧ ಅಕ್ಷರ ಧಾಮ, (ಸ್ವಾಮಿ ನಾರಾಯಣ ಮಂದಿರ) ವೀಕ್ಷಣೆ ನಂತರ ರಾತ್ರಿ ದೆಹಲಿಯಲ್ಲಿ ವಿಶ್ರಾಂತಿ.

13 ನೇ ದಿನ

ಬೆಳಿಗ್ಗೆ 06.00 ಗಂಟೆಗೆ ಬಸ್ಸಿನಲ್ಲಿ ಹೊರಟು ರಾಷ್ಟçಪತಿ ಭವನ ಪಾರ್ಲಿಮೆಂಟ್ ಹೌಸ್ (ಹೊರನೋಟ), ಬಿರ್ಲಾಮಂದಿರ, ಇಂಡಿಯಾಗೇಟ್, ಇಂದಿರಾಗಾAಧಿ ಮೆಮೋರಿಯಲ್ ಹಾಲ್, ರಾಜ್‌ಘಾಟ್, ಕುತುಬ್‌ಮಿನಾರ್ ವೀಕ್ಷಣೆ ಮಾಡಿಕೊಂಡು ನಂತರ ವಿಮಾನ ನಿಲ್ದಾಣ ತಲುಪಿ ರಾತ್ರಿ ವಿಮಾನದ ಮೂಲಕ ಬೆಂಗಳೂರು ತಲುಪುವುದು ಬೆಂಗಳೂರಿನಿAದ ತಮ್ಮ ತಮ್ಮ ಖರ್ಚಿನಲ್ಲಿ ಶಿವಮೊಗ್ಗ ತಲುಪುವುದು.

Reviews

There are no reviews yet.

From
45,000.00
Enquiry From
0
0.00
Available:
Total:
0
0.00