Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ಮಧ್ಯ ಪ್ರದೇಶ ಮತ್ತು ಭೂಪಾಲ್ ಪ್ರವಾಸ – 8 ದಿನಗಳು

ಸಂದರ್ಶಿಸುವ ಸ್ಥಳಗಳು: 

ಉಜ್ಜಯಿನಿ, ಮಹಾಬಲೇಶ್ವರ, ಮಹಾಕಾಳೇಶ್ವರ, ಸಾಂಚಿ, ಓಂಕಾರೇಶ್ವರ, ಮಾಹೇಶ್ವರ, ಇಂದೋರ್, ಭೂಪಾಲ್

  • ಆಸಕ್ತರು ರೂ, 5,000/- ಅಡ್ವಾನ್ಸ್ ಹಣ ಸಲ್ಲಿಸಿ ತಮ್ಮ ಸೀಟು ಕಾದಿರಿಸಿಕೊಂಡು ಬಾಕಿ ಹಣ 15 ದಿನಗಳ ಮುಂಚೆ ಪೂರ್ತಿ ಹಣ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು. ಯಾತ್ರಿಕರು ಎಲೆಕ್ಷನ್ ಐ ಡಿ/ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರತಕ್ಕದ್ದು.
  • ನಮ್ಮ ಪ್ರವಾಸದ ಪ್ಯಾಕೇಜ್ ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೆ  ಬಸ್ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ, ರೈಲು ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ಮಾತ್ರ ಇರುತ್ತದೆ. ವಿಮಾನ ನಿಲ್ದಾಣಕ್ಕೆ ತಲುಪಿಸುವ ಬಸ್ಸಿನ ವ್ಯವಸ್ಥೆ ಬೇಕಾಗಿದ್ದÀಲ್ಲಿ ಅದರ ದರವನ್ನು ಯಾತ್ರಿಕರೇ ಭರಿಸತಕ್ಕದ್ದು.
  • ನೈಸರ್ಗಿಕ ಕಾರಣಗಳಿಂದ ಪ್ರಯಾಣ ವಿಳಂಬವಾದಲ್ಲಿ ಅಥವಾ ಸಂದರ್ಶನ ಸಮಯದಲ್ಲಿ ಯಾತ್ರಿಕರಿಂದ ವಿಳಂಬವಾಗಿ ಈ ಕಾರಣದಿಂದ ಯಾವುದಾದರೂ ಸಂದರ್ಶನ ಲಭ್ಯವಾಗದಿದ್ದಲ್ಲಿ ವ್ಯವಸ್ಥಾಪಕರು ಜವಾಬ್ದಾರರಲ್ಲ ಇದರ ಬಗ್ಗೆ ಯಾವುದೇ ದೂರು ಸಲ್ಲದು. ಪ್ರಯಾಣ ಸಮಯದಲ್ಲಿ ಇಚ್ಚಿಸಿದ ಸೀಟುಗಳಿಗೆ ಅವಕಾಶವಿರುವುದಿಲ್ಲ. ಬಸ್ಸಿನಲ್ಲಿ ಪ್ರತಿನಿತ್ಯ ಸೀಟುಗಳನ್ನು ಬದಲಾಗಿಸಲಾಗುವುದು.  ರೈಲಿನಲ್ಲಿ ಮಾತ್ರ ಕಂಪ್ಯೂಟರ್ ಮುಖಾಂತರ ಲಭ್ಯವಿರುವ ಸೀಟುಗಳನ್ನು ಕಡ್ಡಾಯವಾಗಿ ಪಡೆಯಬೇಕು.
  • ಯಾವುದೇ ಕಾರಣದಿಂದ ತಮ್ಮ ಸೀಟುಗಳನ್ನು ರದ್ದುಪಡಿಸಿದಲ್ಲಿ ಯಾವುದೇ ರಿಫಂಡ್ ಇರುವುದಿಲ್ಲ.
  • ಮೇಲ್ಕಂಡ ವಿಶೇಷ ಯಾತ್ರೆಯು ಲಾಭ-ನಷ್ಟ ರಹಿತವಾದ ಸಮಾಜಿಕ ಸ್ವಯಂ ಸೇವಾ ಕಾರ್ಯಕ್ರಮವಾಗಿದ್ದು ಯಾತ್ರಿಕರು ಹೆಚ್ಚಿನ ಸೌಲಭ್ಯ ನಿರೀಕ್ಷಿಸದೇ ಆಯೋಜಕರಿಗೆ ಸಹಕರಿಸಬೇಕಾಗಿ ವಿನಂತಿ.

Included/Excluded

  • ಬೆಳಿಗ್ಗೆ ಕಾಫಿ / ಟೀ ಬೆಳಗಿನ ಉಪಹಾರ, ಎರಡು ಊಟ ಮತ್ತು ರಾತ್ರಿ ತಂಗಲು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು.
  • ಯಾತ್ರಿಕರು ಬಟ್ಟೆ, ಊಟದ ತಟ್ಟೆ / ಲೋಟ, ಬೆಡ್‌ಶೀಟ್, ಮತ್ತು ಗಾಳಿ ತಲೆದಿಂಬು, ಅಗತ್ಯ ಔಷದಿ, ಬೀಗ ಮತ್ತು ಸಣ್ಣ ಟಾರ್ಚು, ಮತ್ತು ಹೊದಿಕೆ ಶಾಲನ್ನು ತರಬೇಕು ಹೆಚ್ಚಿಗೆ ಲಗೇಜನ್ನು ತರಬಾರದು, ಎಲ್ಲಾ ಕಡೆ ಪ್ರವೇಶದರ, ದೋಣಿ, ರೀಕ್ಷಾ, ಸಣ್ಣಜೀಪುಗಳು ಇತ್ಯಾದಿ ಖರ್ಚುಗಳನ್ನು ಆಯೋಜಕರಿಂದಲೇ ಭರಿಸಲಾಗುವುದು.
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ಬೆಲೆ ಬಾಳುವ ಒಡವೆಗಳು ಮತ್ತು ಹೆಚ್ಚಿನ ಹಣ ತರಬಾರದು ಯಾವುದೇ ವಸ್ತು, ಹಣ, ಒಡವೆ, ಇತ್ಯಾದಿ ಕಳೆದು ಹೋದಲ್ಲಿ ಆಯೋಜಕರು ಜವಾಬ್ದಾರರಲ್ಲ ಎಲ್ಲಾ ಕಡೆ ಎ.ಟಿ.ಎಂ. ವ್ಯವಸ್ಥೆ ಇರುತ್ತದೆ. ಇದರ ಸೌಲಭ್ಯವನ್ನು ನಮ್ಮ ಮುಖಾಂತರ ಬಳಸಿಕೊಳ್ಳಬಹುದಾಗಿದೆ

Tour Plan

1ನೇ ದಿನ

ಮಧ್ಯಾಹ್ನ 1.00 ಗಂಟೆಗೆ ಬೆಂಗಳೂರಿನಿಂದ ಉಜ್ಜಯಿನಿಗೆ ರೈಲಿನ ಮುಖಾಂತರ ಪ್ರಯಾಣ ಮಾಡುವುದು.

2ನೇ ದಿನ

ರಾತ್ರಿ 9.30 ಉಜ್ಜಯಿನಿಗೆ ತಲುಪಿದ ನಂತರ ವಿಶ್ರಾಂತಿ ಪಡೆಯುವುದು.

3ನೇ ದಿನ

ಬೆಳಿಗ್ಗೆ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದರ್ಶನ ಪಡೆದು ಹರಸಿದ್ದಿ ಮಾತಾ ಶಕ್ತಿಪೀಠ ಮಂದಿರ, ಮಹಾಕಾಳಿ, ಕಾಲಭೈರವ ಶಿಪ್ರಾನದಿ ರಾಮಘಾಟ್, ರಾಜಾ ವಿಕ್ರಮಾದಿತ್ಯ ಮೋಕ್ಷ ಸ್ಥಳ ಮಂಗಳ ಗ್ರಹ ಸಾಂದಿಪನಿ ಆಶ್ರಮ ವೀಕ್ಷಣೆ ಮಾಡಿ ಓಂಕಾರೇಶ್ವರದಲ್ಲಿ ರಾತ್ರಿ ವಿಶ್ರಾಂತಿ ಪಡೆಯುವುದು.

4ನೇ ದಿನ

ಬೆಳಿಗ್ಗೆ ನರ್ಮದಾ ನದಿಯಲ್ಲಿ ಸ್ನಾನ ಮುಗಿಸಿ ಓಂಕಾರೇಶ್ವರ ಜ್ಯೋತಿರ್ಲಿಂಗ ದರ್ಶನ ಪಡೆದು ಮಾಮಾಲೇಶ್ವರ ಮಂದಿರ ವೀಕ್ಷಣೆ ಮಾಡಿ ಮಾಹೇಶ್ವರಕ್ಕೆ ಪ್ರಯಾಣ ಮಾಡಿ ರಾಣಿ ಅಹಲ್ಯಾಬಾಯಿ ಹೋಳ್ಕರ ಕೋಟೆ ವೀಕ್ಷಣೆ ಇಂದೂರ್‌ಗೆ ಪ್ರಯಾಣ ಮಾಡಿ ರಾತ್ರಿ ವಿಶ್ರಾಂತಿ ಪಡೆಯುವುದು.

5ನೇ ದಿನ

ಬೆಳಿಗ್ಗೆ ಹೊರಟು 56 ದೂಖಾನ್, ಕಜರಾನ ಗಣೇಶ್, ರಾಜವಾಡ ಮಾರ್ಕೇಟ್ ವೀಕ್ಷಣೆ ಮಾಡಿ ಭೂಪಲ್‌ಗೆ ಪ್ರಯಾಣ ವಿಶ್ರಾಂತಿ ಪಡೆಯುವುದು.

6ನೇ ದಿನ

ಬೆಳಿಗ್ಗೆ ಹೊರಟು ಸಾಂಚಿಯಲ್ಲಿರುವ ಭೌದ್ಧ ಸ್ಥೂಪ ವೀಕ್ಷಣೆ ನಂತರ ಬೃಹತ್ ಲಿಂಗ ಭೋಜೇಶ್ವರ ದರ್ಶನ ಪಡೆದು ಭೂಪಾಲ್‌ನಲ್ಲಿರುವ ಉಪ್ಪಾರ್ ಲೇಕ್ ವೀಕ್ಷಣೆ ನಂತರ ಸಂಜೆ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವುದು.

7ನೇ ದಿನ

ಪ್ರಯಾಣ ಮುಂದುವರೆಯುವುದು.

8ನೇ ದಿನ

ಬೆಳಿಗ್ಗೆ 5.10ಕ್ಕೆ ಬೆಂಗಳೂರಿಗೆ ಬಂದು ತಲುಪುವುದು.

Reviews

There are no reviews yet.

From
16,000.00
Enquiry From
0
0.00
Available:
Total:
0
0.00