Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ಮಹಾರಾಷ್ಟ್ರ ಪಂಚ ಜ್ಯೋತಿರ್ಲಿಂಗ ದರ್ಶನ – 8 ದಿನಗಳ ಪ್ರವಾಸ

ಸಂದರ್ಶಿಸುವ ಸ್ಥಳಗಳು : 

ಜ್ಯೋತಿರ್ಲಿಂಗ, ಮಾಹೇಶ್ವರ, ಗೃಷ್ಣೆಶ್ವರ, ನಾಗೇಶ್ವರ, ಎಲ್ಲೋರ, ನಾಸಿಕ್, ರ್ತೈಯಂಬಕೇಶ್ವರ, ಶಿರಡಿ, ಶನಿ ಸಿಂಗಾಪುರ, ಭೀಮಾಶಂಕರ

  • ಆಸಕ್ತರು ರೂ, 5,000/- ಅಡ್ವಾನ್ಸ್ ಹಣ ಸಲ್ಲಿಸಿ ತಮ್ಮ ಸೀಟು ಕಾದಿರಿಸಿಕೊಂಡು ಬಾಕಿ ಹಣ 15 ದಿನಗಳ ಮುಂಚೆ ಪೂರ್ತಿ ಹಣ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು. ಯಾತ್ರಿಕರು ಎಲೆಕ್ಷನ್ ಐ ಡಿ/ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರತಕ್ಕದ್ದು.
  • ನಮ್ಮ ಪ್ರವಾಸದ ಪ್ಯಾಕೇಜ್  ಬಸ್ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ, ರೈಲು ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ಮಾತ್ರ ಇರುತ್ತದೆ. ವಿಮಾನ ನಿಲ್ದಾಣಕ್ಕೆ ತಲುಪಿಸುವ ಬಸ್ಸಿನ ವ್ಯವಸ್ಥೆ ಬೇಕಾಗಿದ್ದÀಲ್ಲಿ ಅದರ ದರವನ್ನು ಯಾತ್ರಿಕರೇ ಭರಿಸತಕ್ಕದ್ದು.
  • ನೈಸರ್ಗಿಕ ಕಾರಣಗಳಿಂದ ಪ್ರಯಾಣ ವಿಳಂಬವಾದಲ್ಲಿ ಅಥವಾ ಸಂದರ್ಶನ ಸಮಯದಲ್ಲಿ ಯಾತ್ರಿಕರಿಂದ ವಿಳಂಬವಾಗಿ ಈ ಕಾರಣದಿಂದ ಯಾವುದಾದರೂ ಸಂದರ್ಶನ ಲಭ್ಯವಾಗದಿದ್ದಲ್ಲಿ ವ್ಯವಸ್ಥಾಪಕರು ಜವಾಬ್ದಾರರಲ್ಲ ಇದರ ಬಗ್ಗೆ ಯಾವುದೇ ದೂರು ಸಲ್ಲದು. ಪ್ರಯಾಣ ಸಮಯದಲ್ಲಿ ಇಚ್ಚಿಸಿದ ಸೀಟುಗಳಿಗೆ ಅವಕಾಶವಿರುವುದಿಲ್ಲ. ಬಸ್ಸಿನಲ್ಲಿ ಪ್ರತಿನಿತ್ಯ ಸೀಟುಗಳನ್ನು ಬದಲಾಗಿಸಲಾಗುವುದು.  ರೈಲಿನಲ್ಲಿ ಮಾತ್ರ ಕಂಪ್ಯೂಟರ್ ಮುಖಾಂತರ ಲಭ್ಯವಿರುವ ಸೀಟುಗಳನ್ನು ಕಡ್ಡಾಯವಾಗಿ ಪಡೆಯಬೇಕು.
  • ಯಾವುದೇ ಕಾರಣದಿಂದ ತಮ್ಮ ಸೀಟುಗಳನ್ನು ರದ್ದುಪಡಿಸಿದಲ್ಲಿ ಯಾವುದೇ ರಿಫಂಡ್ ಇರುವುದಿಲ್ಲ.
  • ಮೇಲ್ಕಂಡ ವಿಶೇಷ ಯಾತ್ರೆಯು ಲಾಭ-ನಷ್ಟ ರಹಿತವಾದ ಸಮಾಜಿಕ ಸ್ವಯಂ ಸೇವಾ ಕಾರ್ಯಕ್ರಮವಾಗಿದ್ದು ಯಾತ್ರಿಕರು ಹೆಚ್ಚಿನ ಸೌಲಭ್ಯ ನಿರೀಕ್ಷಿಸದೇ ಆಯೋಜಕರಿಗೆ ಸಹಕರಿಸಬೇಕಾಗಿ ವಿನಂತಿ.

Included/Excluded

  • ಬೆಳಿಗ್ಗೆ ಕಾಫಿ / ಟೀ ಬೆಳಗಿನ ಉಪಹಾರ, ಎರಡು ಊಟ ಮತ್ತು ರಾತ್ರಿ ತಂಗಲು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು.
  • ಯಾತ್ರಿಕರು ಬಟ್ಟೆ, ಊಟದ ತಟ್ಟೆ / ಲೋಟ, ಬೆಡ್‌ಶೀಟ್, ಮತ್ತು ಗಾಳಿ ತಲೆದಿಂಬು, ಅಗತ್ಯ ಔಷದಿ, ಬೀಗ ಮತ್ತು ಸಣ್ಣ ಟಾರ್ಚು, ಮತ್ತು ಹೊದಿಕೆ ಶಾಲನ್ನು ತರಬೇಕು ಹೆಚ್ಚಿಗೆ ಲಗೇಜನ್ನು ತರಬಾರದು, ಎಲ್ಲಾ ಕಡೆ ಪ್ರವೇಶದರ, ದೋಣಿ, ರೀಕ್ಷಾ, ಸಣ್ಣಜೀಪುಗಳು ಇತ್ಯಾದಿ ಖರ್ಚುಗಳನ್ನು ಆಯೋಜಕರಿಂದಲೇ ಭರಿಸಲಾಗುವುದು.
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ಬೆಲೆ ಬಾಳುವ ಒಡವೆಗಳು ಮತ್ತು ಹೆಚ್ಚಿನ ಹಣ ತರಬಾರದು ಯಾವುದೇ ವಸ್ತು, ಹಣ, ಒಡವೆ, ಇತ್ಯಾದಿ ಕಳೆದು ಹೋದಲ್ಲಿ ಆಯೋಜಕರು ಜವಾಬ್ದಾರರಲ್ಲ ಎಲ್ಲಾ ಕಡೆ ಎ.ಟಿ.ಎಂ. ವ್ಯವಸ್ಥೆ ಇರುತ್ತದೆ. ಇದರ ಸೌಲಭ್ಯವನ್ನು ನಮ್ಮ ಮುಖಾಂತರ ಬಳಸಿಕೊಳ್ಳಬಹುದಾಗಿದೆ

Tour Plan

1ನೇ ದಿನ

ಮಧ್ಯಾಹ್ನ 3.00 ಗಂಟೆಗೆ ಶಿವಮೊಗ್ಗದಿಂದ ಹೈಟೆಕ್ ಬಸ್ಸಿನಲ್ಲಿ ಪಂಡರಾಪುರಕ್ಕೆ ಪ್ರಯಾಣ ಮಾಡುವುದು

2ನೇ ದಿನ

ಬೆಳಿಗ್ಗೆ ಪಂಡರಾಪುರದ ಪಾಂಡುರಂಗ ವಿಠಲ ಸ್ವಾಮಿ ಮತ್ತು ರುಕ್ಮಣಿ ದರ್ಶನ ಮಾಡಿದ ಉಪಹಾರ ಸೇವಿಸಿದ ನಂತರ ಸೊಲ್ಲಾಪುರಕ್ಕೆ ಪ್ರಯಾಣ ಮಾಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮಿ ದರ್ಶನ ಮಾಡಿ ತುಳಜಾಪುರಕ್ಕೆ ಪ್ರಯಾಣಿಸಿ ಮಧ್ಯಾಹ್ನ ಊಟದ ನಂತರ ತುಳಜಾಭವಾನಿ ದರ್ಶನ ಪಡೆದು ಅಲ್ಲಿಯೇ ತುಳಜಾಪುರದಲ್ಲಿ ತಂಗುವುದು.

3ನೇ ದಿನ

ಬೆಳಿಗ್ಗೆ ತುಳಜಾಪುರದಿಂದ ಹೊರಟು ಪರ್ಲಿ ವೈದ್ಯನಾಥ ಜ್ಯೋತಿರ್ಲಿಂಗ ಹಾಗೂ ಅಂಧಾನಾಗೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಿದ ನಂತರ ಎಲ್ಲೋರಗೆ ಪ್ರಯಾಣ ಮಾಡಿ ನಂತರ ಎಲ್ಲೋರದಲ್ಲಿ ತಂಗುವುದು.

4ನೇ ದಿನ

ಬೆಳಿಗ್ಗೆ ಘೃಷ್ಣೇಶ್ವರ ಜ್ಯೋತಿರ್ಲಿಂಗ ದರ್ಶನ, ಎಲ್ಲೋರ ಗುಹಾಂತರ ದೇವಾಲಯ ವೀಕ್ಷಣೆ ಮಾಡಿದ ನಂತರ ಔರಂಗಾಬಾದ್‌ನಲ್ಲಿ ಮಿನಿ ತಾಜ್‌ಮಹಲ್ ವೀಕ್ಷಿಸಿ ಅಲ್ಲಿಂದ ಶನಿಸಿಂಗನಾಪುರಕ್ಕೆ ಪ್ರಯಾಣಿಸಿ ಪ್ರಸಿದ್ಧ ಶನಿದೇವರ ದರ್ಶನ ಪಡೆದು ಶಿರಡಿಯಲ್ಲಿ ತಂಗುವುದು.

5ನೇ ದಿನ

ಶಿರಡಿ ಸಾಯಿಬಾಬಾರ ದರ್ಶನ ಮಾಡಿ ನಂತರ ನಾಸಿಕ್‌ನಲ್ಲಿ ಸೀತಾಗುಹೆ ವೀಕ್ಷಣೆಯ ನಂತರ ರ್ತೈಯಂಬಕೇಶ್ವರ ಕಡೆ ಪ್ರಯಾಣ ಮಾಡಿ ರ್ತೈಯಂಬಕೇಶ್ವರ ಜ್ಯೋತಿರ್ಲಿಂಗ ದರ್ಶನದ ನಂತರ ತ್ರೆöÊಂಯಬಕೇಶ್ವರದಲ್ಲಿ ತಂಗುವುದು.

6ನೇ ದಿನ

ಬೆಳಿಗ್ಗೆ ಭೀಮಾಶಂಕರ ಜ್ಯೋತಿರ್ಲಿಂಗಕ್ಕೆ ಪ್ರಯಾಣಿಸಿ, ಭೀಮಾಶಂಕರ ಜ್ಯೋತಿರ್ಲಿಂಗ ದರ್ಶನ ಪಡೆದು ನಾರಾಯಣಪುರ ವೀಕ್ಷಿಸಿ ನಂತರ ಬಾಲಾಜಿ ಮಂದಿರ ವೀಕ್ಷಣೆ ಮಾಡಿ ನಂತರ ಕೊಲ್ಲಾಪುರ ಕಡೆ ಪ್ರಯಾಣ ಮಾಡಿ ಕೊಲ್ಲಾಪುರದಲ್ಲಿ ತಂಗುವುದು.

7ನೇ ದಿನ

ಬೆಳಿಗ್ಗೆ ಹೊರಟು ಕೊಲ್ಲಾಪುರದ ಶ್ರೀ ಮಹಾಲಕ್ಷಿö್ಮ ದೇವಿ ದರ್ಶನ ಪಡೆದು ಶಿವಮೊಗ್ಗಕ್ಕೆ ಸುರಕ್ಷಿತವಾಗಿ ಬಂದು ತಲುಪುವುದು.

Reviews

There are no reviews yet.

From
18,000.00
Enquiry From
0
0.00
Available:
Total:
0
0.00