Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ವೈಷ್ಣೋದೇವಿ, ಕುಲುಮನಾಲಿ ಮತ್ತು ದೆಹಲಿ ಪ್ರವಾಸ – 12 ದಿನಗಳು

ಸಂದರ್ಶಿಸುವ ಸ್ಥಳಗಳು: 

ದೆಹಲಿ, ಅಮೃತಸರ, ವಾಘ ಬಾರ್ಡರ್, ಕಟ್ರಾ, ವೈಷ್ಣೋದೇವಿ, ಚಾಮುಂಡಾ, ಕಾಂಗ್ರಾ, ಜ್ವಾಲಾಜೀ, ಕುಲುಮನಾಲಿ, ಚಂಡಿಗಡ್, ಕುರುಕ್ಷೇತ್ರ, ಆಗ್ರಾ, ಮಥುರಾ

  • ಆಸಕ್ತರು ರೂ, 15,000/- ಅಡ್ವಾನ್ಸ್ ಹಣ ಸಲ್ಲಿಸಿ ತಮ್ಮ ಸೀಟು ಕಾದಿರಿಸಿಕೊಂಡು ಬಾಕಿ ಹಣ 15 ದಿನಗಳ ಮುಂಚೆ ಪೂರ್ತಿ ಹಣ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು. ಯಾತ್ರಿಕರು ಎಲೆಕ್ಷನ್ ಐ ಡಿ/ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರತಕ್ಕದ್ದು
  • ನಮ್ಮ ಪ್ರವಾಸದ ಪ್ಯಾಕೇಜ್ ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೆ  ಬಸ್ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ, ರೈಲು ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ಮಾತ್ರ ಇರುತ್ತದೆ. ವಿಮಾನ ನಿಲ್ದಾಣಕ್ಕೆ ತಲುಪಿಸುವ ಬಸ್ಸಿನ ವ್ಯವಸ್ಥೆ ಬೇಕಾಗಿದ್ದÀಲ್ಲಿ ಅದರ ದರವನ್ನು ಯಾತ್ರಿಕರೇ ಭರಿಸತಕ್ಕದ್ದು.
  • ನೈಸರ್ಗಿಕ ಕಾರಣಗಳಿಂದ ಪ್ರಯಾಣ ವಿಳಂಬವಾದಲ್ಲಿ ಅಥವಾ ಸಂದರ್ಶನ ಸಮಯದಲ್ಲಿ ಯಾತ್ರಿಕರಿಂದ ವಿಳಂಬವಾಗಿ ಈ ಕಾರಣದಿಂದ ಯಾವುದಾದರೂ ಸಂದರ್ಶನ ಲಭ್ಯವಾಗದಿದ್ದಲ್ಲಿ ವ್ಯವಸ್ಥಾಪಕರು ಜವಾಬ್ದಾರರಲ್ಲ ಇದರ ಬಗ್ಗೆ ಯಾವುದೇ ದೂರು ಸಲ್ಲದು. ಪ್ರಯಾಣ ಸಮಯದಲ್ಲಿ ಇಚ್ಚಿಸಿದ ಸೀಟುಗಳಿಗೆ ಅವಕಾಶವಿರುವುದಿಲ್ಲ. ಬಸ್ಸಿನಲ್ಲಿ ಪ್ರತಿನಿತ್ಯ ಸೀಟುಗಳನ್ನು ಬದಲಾಗಿಸಲಾಗುವುದು.  ರೈಲಿನಲ್ಲಿ ಮಾತ್ರ ಕಂಪ್ಯೂಟರ್ ಮುಖಾಂತರ ಲಭ್ಯವಿರುವ ಸೀಟುಗಳನ್ನು ಕಡ್ಡಾಯವಾಗಿ ಪಡೆಯಬೇಕು.
  • ಯಾವುದೇ ಕಾರಣದಿಂದ ತಮ್ಮ ಸೀಟುಗಳನ್ನು ರದ್ದುಪಡಿಸಿದಲ್ಲಿ ಯಾವುದೇ ರಿಫಂಡ್ ಇರುವುದಿಲ್ಲ.
  • ಮೇಲ್ಕಂಡ ವಿಶೇಷ ಯಾತ್ರೆಯು ಲಾಭ-ನಷ್ಟ ರಹಿತವಾದ ಸಮಾಜಿಕ ಸ್ವಯಂ ಸೇವಾ ಕಾರ್ಯಕ್ರಮವಾಗಿದ್ದು ಯಾತ್ರಿಕರು ಹೆಚ್ಚಿನ ಸೌಲಭ್ಯ ನಿರೀಕ್ಷಿಸದೇ ಆಯೋಜಕರಿಗೆ ಸಹಕರಿಸಬೇಕಾಗಿ ವಿನಂತಿ.

Included/Excluded

  • ಬೆಳಿಗ್ಗೆ ಕಾಫಿ / ಟೀ ಬೆಳಗಿನ ಉಪಹಾರ, ಎರಡು ಊಟ ಮತ್ತು ರಾತ್ರಿ ತಂಗಲು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು.
  • ಯಾತ್ರಿಕರು ಬಟ್ಟೆ, ಊಟದ ತಟ್ಟೆ / ಲೋಟ, ಬೆಡ್‌ಶೀಟ್, ಮತ್ತು ಗಾಳಿ ತಲೆದಿಂಬು, ಅಗತ್ಯ ಔಷದಿ, ಬೀಗ ಮತ್ತು ಸಣ್ಣ ಟಾರ್ಚು, ಮತ್ತು ಹೊದಿಕೆ ಶಾಲನ್ನು ತರಬೇಕು ಹೆಚ್ಚಿಗೆ ಲಗೇಜನ್ನು ತರಬಾರದು, ಎಲ್ಲಾ ಕಡೆ ಪ್ರವೇಶದರ, ದೋಣಿ, ರೀಕ್ಷಾ, ಸಣ್ಣಜೀಪುಗಳು ಇತ್ಯಾದಿ ಖರ್ಚುಗಳನ್ನು ಆಯೋಜಕರಿಂದಲೇ ಭರಿಸಲಾಗುವುದು.
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ಬೆಲೆ ಬಾಳುವ ಒಡವೆಗಳು ಮತ್ತು ಹೆಚ್ಚಿನ ಹಣ ತರಬಾರದು ಯಾವುದೇ ವಸ್ತು, ಹಣ, ಒಡವೆ, ಇತ್ಯಾದಿ ಕಳೆದು ಹೋದಲ್ಲಿ ಆಯೋಜಕರು ಜವಾಬ್ದಾರರಲ್ಲ ಎಲ್ಲಾ ಕಡೆ ಎ.ಟಿ.ಎಂ. ವ್ಯವಸ್ಥೆ ಇರುತ್ತದೆ. ಇದರ ಸೌಲಭ್ಯವನ್ನು ನಮ್ಮ ಮುಖಾಂತರ ಬಳಸಿಕೊಳ್ಳಬಹುದಾಗಿದೆ

Tour Plan

1ನೇ ದಿನ

ರಾತ್ರಿ 08.00 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ವಿಮಾನದ ಮೂಲಕ ಪ್ರಯಾಣಿಸಿ ವಿಶ್ರಾಂತಿ ಪಡೆಯುವುದು

2ನೇ ದಿನ

ಬೆಳಗ್ಗೆ ಹೊರಟು ದೆಹಲಿಯಲ್ಲಿರುವ ಪ್ರವಾಸಿ ಸ್ಥಳಗಳಾದ ಬಿರ್ಲಾ ಮಂದಿರ ಪಾರ್ಲಿಮೆಂಟ್ ಹೌಸ್ ಇಂಡಿಯಾಗೇಟ್ ಲೋಟಸ್ ಮಹಲ್ ಇಂದಿರಾಗಾಂಧಿ ಮ್ಯೂಸಿಯಂ ಕುತುಬ್‌ಮಿನಾರ್ ರಾಜ್‌ಘಾಟ್ ವೀಕ್ಷಿಸಿ ನಂತರ ಸಂಜೆ ಅಕ್ಷರಧಾಮ ಸ್ವಾಮಿನಾರಾಯಣ ಮಂದಿರ ವೀಕ್ಷಿಸಿ ತದನಂತರ ಅಮೃತಸರಕ್ಕೆ ಪ್ರಯಾಣಿಸುವುದು

3ನೇ ದಿನ

ಬೆಳಗ್ಗೆ ಅಮೃತಸರ ತಲುಪಿದ ನಂತರ ವಾಘಾಬಾರ್ಡರ್‌ನಲ್ಲಿ ಭಾರತ ಪಾಕಿಸ್ತಾನ ಪರೇಡ್ ವೀಕ್ಷಿಸಿ ನಂತರ ವಿಶ್ರಾಂತಿ

4ನೇ ದಿನ

ಬೆಳಗ್ಗೆ ಹೊರಟು ಅಮೃತ್ ಸರದಲ್ಲಿರುವ ಗೋಲ್ಡನ್‌ಟೆಂಪಲ್ ದುರ್ಗಾ ಮಂದಿರ ಜಲಿಯನ್ ವಾಲಾಭಾಗ್ ವೀಕ್ಷಿಸಿ ನಂತರ ಕಟ್ರಾಗೆ ಪ್ರಯಾಣಿಸುವುದು ನಂತರ ವೈಷ್ಣೋದೇವಿ ದರ್ಶನ ಪಡೆದು (24 ಗಂಟೆಯೂ ದರ್ಶನಕ್ಕೆ ಅವಕಾಶವಿದೆ ಹಾಗೂ ಕುದುರೆ ಡೋಲಿ ಮತ್ತುರೋಪ್‌ವೇ ಸೌಲಭ್ಯವಿರುತ್ತದೆ) ರಾತ್ರಿ ವಿಶ್ರಾಂತಿ

5ನೇ ದಿನ

ಪೂರ್ತಿದಿನ ವಿಶ್ರಾಂತಿ ಅಥವಾ ಶಾಪಿಂಗ್ ಮಾಡುವುದು

6ನೇ ದಿನ

ಬೆಳಗ್ಗೆ ಹೊರಟು ಚಾಮುಂಡಗೆ ಪ್ರಯಾಣ ಮಾಡಿ ಚಾಮುಂಡ ದೇವಿ ದರ್ಶನ ಪಡೆದು ಕಾಂಗ್ರಾದಲ್ಲಿ ವಜ್ರೇಶ್ವರಿದೇವಿ ದರ್ಶನ ಪಡೆದು ಜ್ವಾಲಾಜಿಯಲ್ಲಿ ರಾತ್ರಿ ವಿಶ್ರಾಂತಿ

7ನೇ ದಿನ

ಬೆಳಗ್ಗೆ ಹೊರಟು ಜ್ವಾಲಾಜಿ ಮಂದಿರ ವೀಕ್ಷಿಸಿ ನಂತರ ಕುಲುವಿನಲ್ಲಿ ರಾಪ್ಟಿಂಗ್ ಮಾಡುವ ಅವಕಾಶ ವಿರುತ್ತದೆ ನಂತರ ಮನಾಲಿಗೆ ಪ್ರಯಾಣ ಮಾಡಿ ವಿಶ್ರಾಂತಿ ಪಡೆಯುವುದು

8ನೇ ದಿನ

ಬೆಳಗ್ಗೆ ಮನಾಲಿಯಲ್ಲಿ ಜೀಪ್ ಮೂಲಕ ಪ್ರಯಾಣಿಸಿ ಹಿಡಂಬದೇವಿ ದರ್ಶನ ಪಡೆದು ನಂತರ  ರೋತಂಗ್ ಪಾಸ್ ವೀಕ್ಷಿಸಿ ರಾತ್ರಿ ಚಂಡಿಗಡ್‌ನಲ್ಲಿ ವಿಶ್ರಾಂತಿ

9ನೇ ದಿನ

ಬೆಳಗ್ಗೆ ಚಂಡಿಘಡ್‌ನಲ್ಲಿರುವ ರಾಕ್‌ಗಾರ್ಡನ್ ಹಾಗೂ ಸುಕನಾ ಲೇಕ್ ವೀಕ್ಷಿಸಿ ಕುರುಕ್ಷೇತ್ರದಲ್ಲಿ ಬ್ರಹ್ಮಸರೋವರ ನೋಡಿಕೊಂಡು ದೆಹಲಿಗೆ ಪ್ರಯಾಣಿಸಿ ವಿಶ್ರಾಂತಿ

10ನೇ ದಿನ

ಬೆಳಗ್ಗೆ ದೆಹಲಿಯಿಂದ ಆಗ್ರಾಗೆ ಪ್ರಯಾಣಿಸಿ ವಿಶ್ವಪ್ರಸಿದ್ಧ ತಾಜ್‌ಮಹಲ್ ಮತ್ತು ಕೆಂಪು ಕೋಟಿ ವೀಕ್ಷಿಸಿ ನಂತರ ಮಥುರಾದಲ್ಲಿರುವ ಶ್ರೀ ಕೃಷ್ಣ ಜನ್ಮಸ್ಥಳ ವೀಕ್ಷಿಸಿ ದೆಹಲಿಗೆ ಪ್ರಯಾಣಿಸಿ ವಿಶ್ರಾಂತಿ

11ನೇ ದಿನ

ಪೂರ್ತಿದಿನ ವಿಶ್ರಾಂತಿ

12ನೇ ದಿನ

ಬೆಳಗ್ಗೆ ತಿಂಡಿಯನ್ನು ಮುಗಿಸಿಕೊಂಡು ಕರೋಲ್ ಬಾಗ್ ಮತ್ತು ಸರೋಜಿನಿ ಮಾರ್ಕೆಟ್ ಹಾಗೂ ಚೋರ್ ಬಜಾರ್ ನಾನಾÀಕಡೆ ಶಾಪಿಂಗ್ ಮುಗಿಸಿ ರಾತ್ರಿ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ

Reviews

There are no reviews yet.

From
49,000.00
Enquiry From
0
0.00
Available:
Total:
0
0.00