Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ವೈಷ್ಣೋದೇವಿ & ದೆಹಲಿ ಪ್ರವಾಸ – 11 ದಿನಗಳ ಪ್ರವಾಸ

ಸಂದರ್ಶಿಸುವ ಸ್ಥಳಗಳು:

ಆಗ್ರಾ, ಮಥುರಾ, ಹರಿದ್ವಾರ, ಋಷಿಕೇಶ, ಅಮೃತ್ಸರ, ವಾಘಬಾರ್ಡರ್, ಮಾತ ವೈಷ್ಣೋದೇವಿ ದೇವಾಲಯ, ದೆಹಲಿ

  • ಆಸಕ್ತರು ರೂ, 15,000/- ಅಡ್ವಾನ್ಸ್ ಹಣ ಸಲ್ಲಿಸಿ ತಮ್ಮ ಸೀಟು ಕಾದಿರಿಸಿಕೊಂಡು ಬಾಕಿ ಹಣ 15 ದಿನಗಳ ಮುಂಚೆ ಪೂರ್ತಿ ಹಣ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು. ಯಾತ್ರಿಕರು ಎಲೆಕ್ಷನ್ ಐ ಡಿ/ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರತಕ್ಕದ್ದು.
  • ನಮ್ಮ ಪ್ರವಾಸದ ಪ್ಯಾಕೇಜ್ ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೆ  ಬಸ್ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ, ರೈಲು ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ಮಾತ್ರ ಇರುತ್ತದೆ. ವಿಮಾನ ನಿಲ್ದಾಣಕ್ಕೆ ತಲುಪಿಸುವ ಬಸ್ಸಿನ ವ್ಯವಸ್ಥೆ ಬೇಕಾಗಿದ್ದಲ್ಲಿ ಅದರ ದರವನ್ನು ಯಾತ್ರಿಕರೇ ಭರಿಸತಕ್ಕದ್ದು.
  • ನೈಸರ್ಗಿಕ ಕಾರಣಗಳಿಂದ ಪ್ರಯಾಣ ವಿಳಂಬವಾದಲ್ಲಿ ಅಥವಾ ಸಂದರ್ಶನ ಸಮಯದಲ್ಲಿ ಯಾತ್ರಿಕರಿಂದ ವಿಳಂಬವಾಗಿ ಈ ಕಾರಣದಿಂದ ಯಾವುದಾದರೂ ಸಂದರ್ಶನ ಲಭ್ಯವಾಗದಿದ್ದಲ್ಲಿ ವ್ಯವಸ್ಥಾಪಕರು ಜವಾಬ್ದಾರರಲ್ಲ ಇದರ ಬಗ್ಗೆ ಯಾವುದೇ ದೂರು ಸಲ್ಲದು. ಪ್ರಯಾಣ ಸಮಯದಲ್ಲಿ ಇಚ್ಚಿಸಿದ ಸೀಟುಗಳಿಗೆ ಅವಕಾಶವಿರುವುದಿಲ್ಲ. ಬಸ್ಸಿನಲ್ಲಿ ಪ್ರತಿನಿತ್ಯ ಸೀಟುಗಳನ್ನು ಬದಲಾಗಿಸಲಾಗುವುದು.  ರೈಲಿನಲ್ಲಿ ಮಾತ್ರ ಕಂಪ್ಯೂಟರ್ ಮುಖಾಂತರ ಲಭ್ಯವಿರುವ ಸೀಟುಗಳನ್ನು ಕಡ್ಡಾಯವಾಗಿ ಪಡೆಯಬೇಕು.
  • ಯಾವುದೇ ಕಾರಣದಿಂದ ತಮ್ಮ ಸೀಟುಗಳನ್ನು ರದ್ದುಪಡಿಸಿದಲ್ಲಿ ಯಾವುದೇ ರಿಫಂಡ್ ಇರುವುದಿಲ್ಲ.
  • ಮೇಲ್ಕಂಡ ವಿಶೇಷ ಯಾತ್ರೆಯು ಲಾಭ-ನಷ್ಟ ರಹಿತವಾದ ಸಮಾಜಿಕ ಸ್ವಯಂ ಸೇವಾ ಕಾರ್ಯಕ್ರಮವಾಗಿದ್ದು ಯಾತ್ರಿಕರು ಹೆಚ್ಚಿನ ಸೌಲಭ್ಯ ನಿರೀಕ್ಷಿಸದೇ ಆಯೋಜಕರಿಗೆ ಸಹಕರಿಸಬೇಕಾಗಿ ವಿನಂತಿ.

Included/Excluded

  • ಬೆಳಿಗ್ಗೆ ಕಾಫಿ / ಟೀ ಬೆಳಗಿನ ಉಪಹಾರ, ಎರಡು ಊಟ ಮತ್ತು ರಾತ್ರಿ ತಂಗಲು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು.
  • ಯಾತ್ರಿಕರು ಬಟ್ಟೆ, ಊಟದ ತಟ್ಟೆ / ಲೋಟ, ಬೆಡ್‌ಶೀಟ್, ಮತ್ತು ಗಾಳಿ ತಲೆದಿಂಬು, ಅಗತ್ಯ ಔಷದಿ, ಬೀಗ ಮತ್ತು ಸಣ್ಣ ಟಾರ್ಚು, ಮತ್ತು ಹೊದಿಕೆ ಶಾಲನ್ನು ತರಬೇಕು ಹೆಚ್ಚಿಗೆ ಲಗೇಜನ್ನು ತರಬಾರದು, ಎಲ್ಲಾ ಕಡೆ ಪ್ರವೇಶದರ, ದೋಣಿ, ರೀಕ್ಷಾ, ಸಣ್ಣಜೀಪುಗಳು ಇತ್ಯಾದಿ ಖರ್ಚುಗಳನ್ನು ಆಯೋಜಕರಿಂದಲೇ ಭರಿಸಲಾಗುವುದು.
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ಬೆಲೆ ಬಾಳುವ ಒಡವೆಗಳು ಮತ್ತು ಹೆಚ್ಚಿನ ಹಣ ತರಬಾರದು ಯಾವುದೇ ವಸ್ತು, ಹಣ, ಒಡವೆ, ಇತ್ಯಾದಿ ಕಳೆದು ಹೋದಲ್ಲಿ ಆಯೋಜಕರು ಜವಾಬ್ದಾರರಲ್ಲ ಎಲ್ಲಾ ಕಡೆ ಎ.ಟಿ.ಎಂ. ವ್ಯವಸ್ಥೆ ಇರುತ್ತದೆ. ಇದರ ಸೌಲಭ್ಯವನ್ನು ನಮ್ಮ ಮುಖಾಂತರ ಬಳಸಿಕೊಳ್ಳಬಹುದಾಗಿದೆ

Tour Plan

1ನೇ ದಿನ

ಬೆಳಿಗ್ಗೆ ವಿಮಾನದಲ್ಲಿ ವಾರಣಾಸಿಗೆ ಪ್ರಯಾಣ ಮಾಡಿ ಕಾಶಿ ವಿಶ್ವನಾಥ ಹಾಗೂ ವಿಶಾಲಾಕ್ಷಿ ಅನ್ನಪೂರ್ಣೇಶ್ವರಿ ದರ್ಶನ ಮಾಡಿ, ರಾತ್ರಿ ಗಂಗಾರತಿ ವೀಕ್ಷಣೆ ಮಾಡಿ ರಾತ್ರಿ ವಿಶ್ರಾಂತಿ ಪಡೆಯುವುದು.

2ನೇ ದಿನ

ಬೆಳಿಗ್ಗೆ ಹೊರಟು ಕಾಶಿಯಲ್ಲಿನ ಪವಿತ್ರ ಸ್ಥಳಗಳಾದ ಕವಡೆ ಮಾತಾ, ತುಳಸಿ ಮಾನಸ ಮಂದಿರ, ಬಿರ್ಲಾ ಮಂದಿರ, ಕಾಲಭೈರವ ದರ್ಶಮ ಪಡೆದು ರಾತ್ರ‍್ಲಿ ವಿಶ್ರಾಂತಿ ಪಡೆಯುವುದು.

3ನೇ ದಿನ

ಬೆಳಿಗ್ಗೆ ಹೊರಟು ಅಲಹಾಬಾದ್‌ನಲ್ಲಿ ತ್ರೀವೇಣಿ ಸಂಗಮ(ಗAಗಾ, ಯಮುನ, ಸರಸ್ವತಿ) ನದಿಯಲ್ಲಿ ಸ್ನಾನ, ನಂತರ ಹನುಮಾನ್ ಮಂದಿರ ದರ್ಶನ ನಂತರ ರಾತ್ರಿ 11.30 ಕ್ಕೆ ಅಲಹಾಬಾದ್ ಜೈಪುರ್ ಎಕ್ಸ್ಪ್ರೆಸ್ ರೈಲಿನಲ್ಲಿ ಆಗ್ರಾಗೆ ಪ್ರಯಾಣ ಮಾಡುವುದು.

4ನೇ ದಿನ

ಬೆಳಿಗ್ಗೆ 6.45ಕ್ಕೆ ಆಗ್ರಾ ತಲುಪಿ ಸುಪ್ರಸಿದ್ಧ ತಾಜ್‌ಮಹಲ್ ಹಾಗೂ ಆಗ್ರಾ ಕೋಟೆ ವೀಕ್ಷಣೆ ಮಾಡಿ. ಸಂಜೆ ಮಥುರಾದಲ್ಲಿ ಶ್ರೀಕೃಷ್ಣ ಜನ್ಮಸ್ಥಳ ವೀಕ್ಷಣೆ ನಂತರ ರಾತ್ರಿ ದೆಹಲಿಯಲ್ಲಿ ವಿಶ್ರಾಂತಿ ಪಡೆಯುವುದು.

5ನೇ ದಿನ

ಬೆಳಿಗ್ಗೆ ಹೊರಟು ಬಿರ್ಲಾಮಂದಿರ, ಪಾರ್ಲಿಮೆಂಟ್ ಹೌಸ್ ರಾಜ್‌ಭವನ್ (ಹೊರನೋಟ), ಇಂದಿರಾಗಾAಧಿ ಮ್ಯೂಸಿಯಂ ಕುತುಬ್‌ಮಿನಾರ್ ರಾಜ್‌ಘಾಟ್, ಲೋಟಸ್ ಮಹಲ್ ಪ್ರಸಿದ್ದ ಅಕ್ಷರ ಧಾಮ, (ಸ್ವಾಮಿ ನಾರಾಯಣ ಮಂದಿರ) ವೀಕ್ಷಣೆ ಮಾಡಿ ನಂತರ ರಾತ್ರಿ ದೆಹಲಿಯಲ್ಲಿ ವಿಶ್ರಾಂತಿ.

6ನೇ ದಿನ

ಬೆಳಿಗ್ಗೆ ಹೊರಟು ಹರಿದ್ವಾರ್ ತಲುಪಿ ನಂತರ ಋಷಿಕೇಶ್‌ದಲ್ಲಿ ರಾಮಜುಲ್ಲಾ ರಾಮೇಶ್ವರ ಮಂದಿರ ಗೀತಮಂದಿರ, ಸ್ವರ್ಗಾಶ್ರಮ ವೀಕ್ಷಣೆ ನಂತರ ರಾತ್ರಿ ಹರಿದ್ವಾರದಲ್ಲಿ ವಿಶ್ರಾಂತಿ ಪಡೆಯುವುದು.

7ನೇ ದಿನ

ಬೆಳಿಗ್ಗೆ ಹೊರಟು ರೋಫ್‌ವೇ ಮೂಲಕ ತೆರಳಿ ಮಾನಸದೇವಿ ದರ್ಶನ ಪಡೆದು ನಂತರ ಡೆಹ್ರಾಡೂನ್ ಅಮೃತ್‌ಸರ್ ಎಕ್ಸ್ಪ್ರೆಸ್ ರೈಲಿನಲ್ಲಿ ರಾತ್ರಿ ಅಮೃತ್‌ಸರ್‌ಗೆ ಪ್ರಯಾಣ ಮಾಡುವುದು.

8ನೇ ದಿನ

ಬೆಳಿಗ್ಗೆ 7.30 ಕ್ಕೆ ಅಮೃತ್‌ಸರ್ ತಲುಪಿದ ನಂತರ ಗೋಲ್ಡನ್ ಟೆಂಪಲ್, ಜಲಿಯನ್ ವಾಲಾಭಾಗ್ ಮಾತಾ ವೈಷ್ಣೋದೇವಿ ದರ್ಶನ ಪಡೆದು ಸಂಜೆ ವಾಘಾ ಬಾರ್ಡರ್ (ಇಂಡಿಯಾ-ಪಾಕಿಸ್ತಾನ್ ಬಾರ್ಡರ್) ನಲ್ಲಿ ಪೆರೇಡ್ ವೀಕ್ಷಣೆ ನಂತರ ರಾತ್ರಿ ವಿಶ್ರಾಂತಿ ಪಡೆಯುವುದು.

9ನೇ ದಿನ

ಬೆಳಿಗ್ಗೆ ಹೊರಟು ಜಮ್ಮುವಿನಲ್ಲಿ ರಘುನಾಥ್ ಮಂದಿರ ವೀಕ್ಷಣೆ ನಂತರ ರಾತ್ರಿ ಕಟ್ರಾ ತಲುಪುವುದು. ನಂತರ ಕುದುರೆ ಡೋಲಿ ಹೆಲೆಕಾಪ್ಟರ್ ಅಥವಾ ಕಾಲ್ನಡಿಗೆ ಮುಖಾಂತರ ತಲುಪಿ, ಮಾತಾ ವೈಷ್ಣೋದೇವಿ ದರ್ಶನ ಪಡೆಯುವುದು.

10ನೇ ದಿನ

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿಶ್ರಾಂತಿ ಪಡೆದು, ಮಧ್ಯಾಹ್ನ 2 ಗಂಟೆಗೆ ಬಸ್ ಮುಖಾಂತರ ಜಮ್ಮುವಿಗೆ ತೆರಳಿ ಸಂಜೆ 7.20 ಕ್ಕೆ ಡುರಂಟೊ ಎಕ್ಸ್ಪ್ರೆಸ್ ರೈಲಿನಲ್ಲಿ ದೆಹಲಿಗೆ ಪ್ರಯಾಣ ಮಾಡುವುದು.

11ನೇ ದಿನ

ಬೆಳಿಗ್ಗೆ 4.20ಕ್ಕೆ ಸರಾಯ್ ರೋಹಿಲ್ಲಾ ರೈಲು ನಿಲ್ದಾಣ ತಲುಪುವುದು. ನಂತರ ಬಸ್‌ನಲ್ಲಿ ತೆರಳಿ ಕರೋಲ್ಭಾಗ್ ತಲುಪುವುದು. ಷಾಪಿಂಗ್ ಅಥವಾ ವಿಶ್ರಾಂತಿ ಪಡೆದು ಸಂಜೆ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವುದು.

Reviews

There are no reviews yet.

From
48,000.00
Enquiry From
0
0.00
Available:
Total:
0
0.00